HEALTH TIPS

IDFC FIRST Bank ವಂಚನೆ ಪ್ರಕರಣ | ಅಮಾನತುಗೊಂಡ IAS ಅಧಿಕಾರಿ CBI ವಶಕ್ಕೆ

ಚಂಡಿಗಢ: ಪಂಚಕುಲ ಮಹಾನಗರ ಪಾಲಿಕೆಗೆ ಸಂಬಂಧಿಸಿದ 76.46 ಕೋಟಿ ರೂ.ಗಳ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣ ಕೇಡರ್‌ ನ ಅಮಾನತುಗೊಂಡ IAS ಅಧಿಕಾರಿ ರಾಮ್ ಕುಮಾರ್ ಸಿಂಗ್ ಅವರನ್ನು CBI ಬಂಧಿಸಿದೆ.

ಈ ಮಹಾನಗರ ಪಾಲಿಕೆಯ ಖಾತೆಗಳನ್ನು ಚಂಡಿಗಢದ ಸೆಕ್ಟರ್ 32ರಲ್ಲಿರುವ IDFC FIRST Bank ಶಾಖೆಯಲ್ಲಿ ನಿರ್ವಹಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣ ನಾಗರಿಕ ಸೇವೆಯಿಂದ ಬಡ್ತಿ ಪಡೆದ 2012ನೇ ಬ್ಯಾಚ್‌ ನ IAS ಅಧಿಕಾರಿಯಾದ ಸಿಂಗ್, ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಹರಿಯಾಣ ಕೇಡರ್‌ನ ಮೊದಲ IAS ಅಧಿಕಾರಿಯಾಗಿದ್ದಾರೆ. ಅವರನ್ನು ಎಪ್ರಿಲ್ 9ರಂದು ಅಮಾನತುಗೊಳಿಸಲಾಗಿತ್ತು.

CBI, ಚಂಡಿಗಢ ಮತ್ತು ಕರ್ನಾಲ್‌ನಲ್ಲಿರುವ ಅವರ ನಿವಾಸಗಳ ಮೇಲೂ ದಾಳಿ ನಡೆಸಿದ್ದು, ದೋಷಾರೋಪಣೆಗೆ ಪೂರಕವಾದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries