ಸಮರಸ ಚಿತ್ರಸುದ್ದಿ: ಕಾಸರಗೋಡು: ಹೈದರಾಬಾದ್ನ ರವೀಂದ್ರ ಭಾರತಿಯಲ್ಲಿ ನಡೆದ ಪ್ರತಿಷ್ಠಿತ ಸೌತ್ ಇಂಡಿಯನ್ ಯಂಗ್ ರೈಟರ್ಸ್ ಫೆಸ್ಟಿವಲ್'ನಲ್ಲಿ ಕಾಸರಗೋಡಿನ ಕವಯಿತ್ರಿಗಳಾದ ಲಕ್ಷ್ಮಿ ಕೆ(ಕನ್ನಡ ಕವಿತೆ) ಮತ್ತು ದಿವ್ಯಾ ಗಟ್ಟಿ ಪರಕ್ಕಿಲ(ತುಳು ಕವಿತೆ)ಭಾಗವಹಿಸಿ ಕವಿತೆ ವಾಚಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ತೆಲಂಗಾಣ ಸರ್ಕಾರದ ಭಾಷಾ ಮತ್ತು ಸಾಂಸ್ಕøತಿಕ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದ ಕವನ ವಾಚನ ಅಧಿವೇಶನದಲ್ಲಿ ಲಕ್ಷ್ಮೀ ಕೆ. ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.


