ಕಾಸರಗೋಡು: ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ಅವರು ಜುಲೈ 20 ರಂದು ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 9ಕ್ಕೆ ಕಾಸರಗೋಡಿನ ವಿದ್ಯಾ ನಗರದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿರುವರು. 10. 30ಕ್ಕೆ ಉದುಮ ವಿಧಾನಸಭಾ ಕ್ಷೇತ್ರದ ಪೆÇೀಯಿನಾಚಿಯಲ್ಲಿ ನಡೆಯಲಿರುವ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಚೀಮೇನಿಯ ತ್ರಿಕ್ಕರಿಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಮಧ್ಯಾಹ್ನ 2ಗಂಟೆಗೆ ಮೇಲಂಕೊಟ್ಟುನಲ್ಲಿರುವ ಜಿಲ್ಲಾ ಗ್ರಂಥಾಲಯ ಮಂಡಳಿಯ ಪ್ರಧಾನ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟಿಸುವರು. 3ಕ್ಕೆ ಪೆರಿಯಾ ಎಸ್.ಎನ್. ಕಾಲೇಜಿನಲ್ಲಿ ನಡೆಯಲಿರುವ ಪದವಿ ಪ್ರದಾನ ಹಾಗೂ ಹೊಸ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4ಕ್ಕೆ ಸಚಿವರು ದೇಳಿಯಲ್ಲಿರುವ ಸಾ-ಅದಿಯಾ ಕಾನೂನು ಕಾಲೇಜಿನ ಹೊಸ ಕಟ್ಟಡದ ಮೊದಲ ವಿಭಾಗವನ್ನು ಉದ್ಘಾಟಿಸುವರು.

