ಹೈದರಾಬಾದ್: ಅಮೆರಿಕ ಭೇಟಿಗೆ ತಮಗೆ ಅನುಮತಿ ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೋಮವಾರ ಆರೋಪಿಸಿದ್ದಾರೆ.
'ಕೇಂದ್ರ ಸರ್ಕಾರದಲ್ಲಿ ಗುಜರಾತ್ ಪ್ರಾಬಲ್ಯ ಹೆಚ್ಚಾಗಿದೆ ಮತ್ತು ಅದು ತೆಲಂಗಾಣದ ಅಭಿವೃದ್ಧಿಗೆ ತೊಡಕಾಗುತ್ತಿದೆ.
ಇದು ವೈಯಕ್ತಿಕವಾಗಿ ನನಗೆ ಮಾಡಿದ ಅವಮಾನವಲ್ಲ, ರಾಜ್ಯದ ನಾಲ್ಕು ಕೋಟಿ ಜನತೆಗೆ ಮಾಡಿದ ಅವಮಾನ' ಎಂದರು.
'ವೈಬ್ರಂಟ್ ಗುಜರಾತ್' ಭಾಗವಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಮೆರಿಕ, ಕೆನಡಾಕ್ಕೆ ಭೇಟಿ ನೀಡಲು ಮತ್ತು ಎರಡೂ ದೇಶಗಳಲ್ಲಿ ರೋಡ್ ಷೋ ಮಾಡಲು ಅನುಮತಿ ನೀಡಲಾಗಿದೆ. ಆದರೆ ನಮಗೆ ಮಾತ್ರ ನಿರಾಕರಿಸಲಾಗಿದೆ' ಎಂದೂ ಅವರು ಹೇಳಿದರು.

