ಕಾಸರಗೋಡು: ಜಿಲ್ಲೆಯಲ್ಲಿ ವ್ಯಕ್ತಿಗಳು, ಟ್ರಸ್ಟ್ಗಳು ಅಥವಾ ದೇವಸ್ವಂ ಮಂಡಳಿಗಳ ಒಡೆತನದಲ್ಲಿರುವ 'ದೇವರ ಅರಣ್ಯ' ಪ್ರದೇಶ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ಆರ್ಥಿಕ ನೆರವನ್ನು ನೀಡುವ ಯೋಜನೆ ಹಮ್ಮಿಕೊಂಡಿದೆ.
ದೇವರ ಅರಣ್ಯ ಪ್ರದೇಶ ಹೊಂದಿರುವ ಅರ್ಹ ಮಾಲೀಕರು, ತಮ್ಮ ಒಡೆತನ ಮತ್ತು ಅರನ್ಯದ ವಿಸ್ತೀರ್ಣವನ್ನು ದೃಢೀಕರಿಸುವ ದಾಖಲೆಗಳೊಂದಿಗೆ ಸೆಪ್ಟೆಂಬರ್ 10 ರೊಳಗೆ ಕಾಸರಗೋಡಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ ವಿಭಾಗೀಯ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಹಿಂದಿನ ವರ್ಷಗಳಲ್ಲಿ ಆರ್ಥಿಕ ನೆರವು ಪಡೆದಿರುವ 'ದೇವರ ಅರಣ್ಯ'ಪ್ರದೇಶವನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆಗಳನ್ನು ಕೇರಳ ಅರಣ್ಯ ಇಲಾಖೆಯ ವೆಬ್ಸೈಟ್ www.forest.kerala.gov.in ಅಥವಾ ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗದ ಕಚೇರಿಯಿಂದ ಪಡೆಯಬಹುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಕ್ಯೆ(9447979152)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

