ಮಧೂರು ಸನಾತನ ಸೇವಾ ಟ್ರಸ್ಟ್ನ ವಿಶೇಷ ಸಭೆ
ಮಧೂರು: ಸನಾತನ ಸೇವಾ ಟ್ರಸ್ಟ್ ಮಧೂರು ಇದರ ವಿಶೇಷ ಸಭೆಯು ಮಧೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಭಜನಾ ಮಂದಿರದಲ್ಲಿ ಇತ್ತೀಚೆಗೆ ಜರಗಿತು.
ಟ್ರಸ್ಟ್ನ ಅಧ್ಯಕ್ಷರಾಗಿದ್ದ ಮಾಧವ ಹೊಳ್ಳ ಅವರ ನಿಧನಕ್ಕೆ ಶ್ರದ್ಧಾಂಜಲಿ ಅಪರ್ಿಸಲಾಯಿತು. ಮಾಧವ ಹೊಳ್ಳ ಅವರ ಪುತ್ರ ರಾಧಾಕೃಷ್ಣ ಹೊಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸನಾತನ ಸೇವಾ ಟ್ರಸ್ಟ್ನ ಸದಸ್ಯರು, ಸಕ್ರಿಯ ಸಾಯಿ ಬಂಧುಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.
ವಿಶೇಷ ಆಹ್ವಾನಿತರಾಗಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಸಿ. ಉಪ್ಪಳ ಉಪಸ್ಥಿತರಿದ್ದರು. ಸನಾತನ ಸೇವಾ ಟ್ರಸ್ಟ್ ಮಧೂರು ಘಟಕದ ಅಧ್ಯಕ್ಷರಾಗಿ ರಾಧಾಕೃಷ್ಣ ಹೊಳ್ಳ ಸವರ್ಾನುಮತದಿಂದ ಆಯ್ಕೆಯಾದರು. ಪ್ರಧಾನ ಟ್ರಸ್ಟಿಯಾಗಿ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ ಹಾಗೂ ಕೋಶಾಧಿಕಾರಿಯಾಗಿ ಬಾಬು ಪಾಟಾಳಿ ಪರಕ್ಕಿಲ ಅವರನ್ನು ಆರಿಸಲಾಯಿತು.
ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಧೂರು ಘಟಕದ ಪ್ರಧಾನ ಸಂಚಾಲಕ ಹುದ್ದೆಗೆ ಹಾಜರಿದ್ದ ಯಾರೊಬ್ಬರೂ ಆಸಕ್ತಿ ವಹಿಸದ ಕಾರಣ ಜಿಲ್ಲಾ ಉಪಾಧ್ಯಕ್ಷರ ಸಲಹೆ ಮೇರೆಗೆ ಅದೃಷ್ಟ ಚೀಟಿ ಎತ್ತಿ ಚುನಾಯಿಸುವ ತೀಮರ್ಾನಕ್ಕೆ ಬರಲಾಯಿತು. ಅದರಂತೆ ಅದೃಷ್ಟ ಚೀಟಿಯನ್ನು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಚರಣಕಮಲದಲ್ಲಿ ಇಟ್ಟು ಚೀಟಿ ಎತ್ತುವ ಮೂಲಕ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ ಅವರ ಹೆಸರು ಆಯ್ಕೆಯಾಯಿತು. ಓಂಕಾರ ಸಾಯಿ ಗಾಯತ್ರಿಯೊಂದಿಗೆ ಪ್ರಾರಂಭವಾದ ಸಭೆಯು ಓಂಕಾರದೊಂದಿಗೆ ಮುಕ್ತಾಯವಾಯಿತು.
ಮಧೂರು: ಸನಾತನ ಸೇವಾ ಟ್ರಸ್ಟ್ ಮಧೂರು ಇದರ ವಿಶೇಷ ಸಭೆಯು ಮಧೂರು ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಭಜನಾ ಮಂದಿರದಲ್ಲಿ ಇತ್ತೀಚೆಗೆ ಜರಗಿತು.
ಟ್ರಸ್ಟ್ನ ಅಧ್ಯಕ್ಷರಾಗಿದ್ದ ಮಾಧವ ಹೊಳ್ಳ ಅವರ ನಿಧನಕ್ಕೆ ಶ್ರದ್ಧಾಂಜಲಿ ಅಪರ್ಿಸಲಾಯಿತು. ಮಾಧವ ಹೊಳ್ಳ ಅವರ ಪುತ್ರ ರಾಧಾಕೃಷ್ಣ ಹೊಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸನಾತನ ಸೇವಾ ಟ್ರಸ್ಟ್ನ ಸದಸ್ಯರು, ಸಕ್ರಿಯ ಸಾಯಿ ಬಂಧುಗಳು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.
ವಿಶೇಷ ಆಹ್ವಾನಿತರಾಗಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಸಿ. ಉಪ್ಪಳ ಉಪಸ್ಥಿತರಿದ್ದರು. ಸನಾತನ ಸೇವಾ ಟ್ರಸ್ಟ್ ಮಧೂರು ಘಟಕದ ಅಧ್ಯಕ್ಷರಾಗಿ ರಾಧಾಕೃಷ್ಣ ಹೊಳ್ಳ ಸವರ್ಾನುಮತದಿಂದ ಆಯ್ಕೆಯಾದರು. ಪ್ರಧಾನ ಟ್ರಸ್ಟಿಯಾಗಿ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ ಹಾಗೂ ಕೋಶಾಧಿಕಾರಿಯಾಗಿ ಬಾಬು ಪಾಟಾಳಿ ಪರಕ್ಕಿಲ ಅವರನ್ನು ಆರಿಸಲಾಯಿತು.
ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಧೂರು ಘಟಕದ ಪ್ರಧಾನ ಸಂಚಾಲಕ ಹುದ್ದೆಗೆ ಹಾಜರಿದ್ದ ಯಾರೊಬ್ಬರೂ ಆಸಕ್ತಿ ವಹಿಸದ ಕಾರಣ ಜಿಲ್ಲಾ ಉಪಾಧ್ಯಕ್ಷರ ಸಲಹೆ ಮೇರೆಗೆ ಅದೃಷ್ಟ ಚೀಟಿ ಎತ್ತಿ ಚುನಾಯಿಸುವ ತೀಮರ್ಾನಕ್ಕೆ ಬರಲಾಯಿತು. ಅದರಂತೆ ಅದೃಷ್ಟ ಚೀಟಿಯನ್ನು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಚರಣಕಮಲದಲ್ಲಿ ಇಟ್ಟು ಚೀಟಿ ಎತ್ತುವ ಮೂಲಕ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ ಅವರ ಹೆಸರು ಆಯ್ಕೆಯಾಯಿತು. ಓಂಕಾರ ಸಾಯಿ ಗಾಯತ್ರಿಯೊಂದಿಗೆ ಪ್ರಾರಂಭವಾದ ಸಭೆಯು ಓಂಕಾರದೊಂದಿಗೆ ಮುಕ್ತಾಯವಾಯಿತು.