ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರೀಡಾಕೂಟ
ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಕಾರ್ಯಕರ್ತರಿಗೆ ಕ್ರೀಡಾಕೂಟ ತಾಳಿಪಡ್ಪು ಮೈದಾನದಲ್ಲಿ ಇತ್ತೀಚೆಗೆ ಜರಗಿತು.
ಸ್ನೇಹಕೂಟ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಕ್ರೀಡಾಕೂಟವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಘ್ ಬಲೂನ್ಗಳನ್ನು ಹಾರಿಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಕಾರ್ಯಕರ್ತರ ಮಧ್ಯೆ ಉತ್ತಮ ಸಂಬಂಧ, ವಿಶಾಲ ಮನೋಭಾವಗಳು ಏರ್ಪಟ್ಟಲ್ಲಿ ಯೋಜನೆಯ ಅನುಷ್ಠಾನಗಳಲ್ಲಿ ಉತ್ತಮ ಬೆಳವಣಿಗೆಗಳು ಸಾಧ್ಯ. ಪ್ರತಿಯೊಬ್ಬರಲ್ಲೂ ಸ್ನೇಹ ಬಾಂಧವ್ಯಗಳಿಂದ ವ್ಯಕ್ತಿ, ವ್ಯಕ್ತಿತ್ವಗಳ ಪೂರಕ ಬೆಳವಣಿಗೆಗೆ ಕಾರಣವಾಗುವುದೆಂದು ಅವರು ತಿಳಿಸಿದರು.
ವಿವಿಧ ಆಟೋಟ ಸ್ಪಧರ್ೆಗಳ ತೀಪರ್ುಗಾರರಾಗಿ ದಿನೇಶ್ ಪಾವಳ, ಲೋಕೇಶ್ ಪಾವಳ ಭಾಗವಹಿಸಿದರು. ಜಿಲ್ಲಾ ಯೋಜನಾಧಿಕಾರಿ ಚೇತನಾ .ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಧನಂಜಯ್ ಸ್ವಾಗತಿಸಿ, ವಿಶ್ವನಾಥ ಗೌಡ ವಂದಿಸಿದರು. ಮಧುರಾ ವಸಂತ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕರ್ತರು ವಿವಿಧ ಕ್ರೀಡಾ ಸ್ಪಧರ್ೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಕಾರ್ಯಕರ್ತರಿಗೆ ಕ್ರೀಡಾಕೂಟ ತಾಳಿಪಡ್ಪು ಮೈದಾನದಲ್ಲಿ ಇತ್ತೀಚೆಗೆ ಜರಗಿತು.
ಸ್ನೇಹಕೂಟ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಕ್ರೀಡಾಕೂಟವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಘ್ ಬಲೂನ್ಗಳನ್ನು ಹಾರಿಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಕಾರ್ಯಕರ್ತರ ಮಧ್ಯೆ ಉತ್ತಮ ಸಂಬಂಧ, ವಿಶಾಲ ಮನೋಭಾವಗಳು ಏರ್ಪಟ್ಟಲ್ಲಿ ಯೋಜನೆಯ ಅನುಷ್ಠಾನಗಳಲ್ಲಿ ಉತ್ತಮ ಬೆಳವಣಿಗೆಗಳು ಸಾಧ್ಯ. ಪ್ರತಿಯೊಬ್ಬರಲ್ಲೂ ಸ್ನೇಹ ಬಾಂಧವ್ಯಗಳಿಂದ ವ್ಯಕ್ತಿ, ವ್ಯಕ್ತಿತ್ವಗಳ ಪೂರಕ ಬೆಳವಣಿಗೆಗೆ ಕಾರಣವಾಗುವುದೆಂದು ಅವರು ತಿಳಿಸಿದರು.
ವಿವಿಧ ಆಟೋಟ ಸ್ಪಧರ್ೆಗಳ ತೀಪರ್ುಗಾರರಾಗಿ ದಿನೇಶ್ ಪಾವಳ, ಲೋಕೇಶ್ ಪಾವಳ ಭಾಗವಹಿಸಿದರು. ಜಿಲ್ಲಾ ಯೋಜನಾಧಿಕಾರಿ ಚೇತನಾ .ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಧನಂಜಯ್ ಸ್ವಾಗತಿಸಿ, ವಿಶ್ವನಾಥ ಗೌಡ ವಂದಿಸಿದರು. ಮಧುರಾ ವಸಂತ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕರ್ತರು ವಿವಿಧ ಕ್ರೀಡಾ ಸ್ಪಧರ್ೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.