HEALTH TIPS

No title

                 ನಾಪತ್ತೆಯಾಗಿದ್ದ ಅಯ್ಯಪ್ಪ ಭಕ್ತನ ಮೃತದೇಹ ಪತ್ತೆ
  ಕಾಸರಗೋಡು: ಶಬರಿಮಲೆ ಶ್ರೀಧರ್ಮಶಾಸ್ತಾ ಸನ್ನಿಧಿಗೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಬಹುದೆಂದು ಸವರ್ೋಚ್ಚ ನ್ಯಾಯಾಲಯ ನೀಡಿದತೀಪರ್ು ಮತ್ತು ಅದನ್ನು ಜಾರಿಗೊಳಿಸಲು ರಾಜ್ಯ ಸರಕಾರ ತೊರಿದ ವಿಶೇಷ ಆಸಕ್ತಿಯ ಬಳಿಕ ಉಂಟಾದ ಸಂಘರ್ಷದ ಸಂದರ್ಭ ಕಾಣೆಯಾದ ಅಯ್ಯಪ್ಪ ಭಕ್ತನದ್ದೆಂದು ಸಂಶಯಿಸುವ ವ್ಯಕ್ತಿಯೋರ್ವನ ಮೃತದೇಹ ಗುರುವಾರ ಸಂಜೆ ಶಬರಿಮಲೆ ಸಮೀಪದ ಪಂಪೆಯ ಸಮೀಪದ ಕಾಡೊಳಗೆ ಪತ್ತೆಯಾಗಿದೆ.
   ಪಂದಳ ನಿವಾಸಿ ಶಿವದಾಸನ್(60) ಮೃತದೇಹ ಪತ್ತೆಯಾಗಿದ್ದು, ಮೃತದೇಹದ ಸಮೀಪ ದ್ವಿಚಕ್ರವಾಹನವೊಂದು ಕಂಡುಬಂದಿದೆ. ಮೃತದೇಹ ಕೊಳೆತಿದ್ದು, ಐದು ದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ.
   ಶಿವದಾಸನ್ ನಾಪತ್ತೆಯಾಗಿರುವ ಬಗ್ಗೆ ಶಿವದಾಸನ್ ನಾಪತ್ತೆಯಾಗಿರುವ ಬಗ್ಗೆ ಪುತ್ರ ಹಾಗೂ ಸಂಬಂಧಿಕರು ಪೋಲೀಸರಿಗೆ ದೂರು  ನೀಡಲು ಠಾಣೆಗೆ ತೆರಳಿದ್ದರೂ ಪೋಲೀಸರು ದೂರು ದಾಖಲಿಸಲು ಉತ್ಸುಕತೆ ತೋರಿರಲಿಲ್ಲ.ಬಳಿಕ ವಿವಿಧ ಠಾಣೆಗಳಿಗೆ ಎಡತಾಕಿ ದೂರು ದಾಖಲಿಸಲು ಮನವಿ ಮಾಡಿದ್ದರು.
   ಪೋಲೀಸರು ಶಿವದಾಸನ್ ನ ಮರಣ ವಾಹನ ಅಪಘಾತದಲ್ಲಿ ಆಗಿರಬೇಕೆಂದು ವಾದಿಸಿ ದೂರನ್ನು ಮುಚ್ಚಿ ಹಾಕಲು ಯತ್ನಿಸಿದ್ದು, ಈ ಬಗ್ಗೆ ಕುಟುಂಬದವರು ಮೃತರಾಗಿರುವುದು ಅಪಘಾತದಿಂದಲ್ಲ.ಪೋಲೀಸರು ನಡೆಸಿದ ಲಾಠಿ ಚಾಜರ್್ ನಿಂದ ಎಂದು ತಿಳಿಸಿದ್ದು, ಪೋಲೀಸರು ಈ ಬಗ್ಗೆ ಘಟನೆಯನ್ನು ಮರೆಮಾಚಲು ಯತ್ನಿಸಿತ್ತಿದೆ ಎಂದು ಆರೋಪಿಸಲಾಗಿದೆ. ಶುಕ್ರವಾರ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೆ ಮರಣಕ್ಕೆ ನಿಖರ ಕಾರಣ ತಿಳಿಯಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
   ಪೋಲೀಸರು ಬೇಜವಬ್ದಾರಿ ಹೇಳಿಕೆ ಖಂಡಿಸಿ ಇಂದು(ಶುಕ್ರವಾರ) ಬಿಜೆಪಿ ಪತ್ತನಂತಿಟ್ಟದಲ್ಲಿ  ಹರತಾಳ ಘೋಷಿಸಿದೆ.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries