HEALTH TIPS

No title

              ಮುಚ್ಚುಗಡೆಗೊಂಡ ಕೈಗಾರಿಕಾ ಕೇಂದ್ರಗಳ ಆರಂಭ : ಸಚಿವ ಇ.ಚಂದ್ರಶೇಖರನ್

    ಕಾಸರಗೋಡು: ಜಿಲ್ಲೆಯ ಕೈಗಾರಿಕಾ ಹಿಂದುಳಿದ ಹಣೆಪಟ್ಟಿಯನ್ನು  ಬದಲಾಯಿಸಲಿರುವ ಪ್ರಯತ್ನವನ್ನು  ಸರಕಾರವು ಆರಂಭಿಸಿರುವುದಾಗಿ ಕಂದಾಯ ಇಲಾಖೆ ಸಚಿವ ಇ.ಚಂದ್ರಶೇಖರನ್ ಹೇಳಿದರು.
   ಅವರು ಉದುಮ ಟೆಕ್ಸ್ಟೈಲ್ಸ್ ಮಿಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ಕಂದಾಯ ಇಲಾಖೆ ಮಾಲಕತ್ವದ 100 ಎಕರೆ ಭೂಮಿಯನ್ನು  ವಾಣಿಜ್ಯ ಇಲಾಖೆಗೆ ಹಸ್ತಾಂತರಿಸಿ ಕಾಂಞಂಗಾಡಿನಲ್ಲಿ  ವಾಣಿಜ್ಯ ಪಾಕರ್್ ನಿಮರ್ಿಸಲು ಉದ್ದೇಶಿಸಲಾಗಿದೆ. ಮುಚ್ಚುಗಡೆಗೊಂಡಿರುವ ವಾಣಿಜ್ಯ ಕೇಂದ್ರಗಳು ತೆರೆದು ಕಾಯರ್ಾಚರಿಸುವುದರ ಮೂಲಕ ವಾಣಿಜ್ಯ ಕ್ಷೇತ್ರದಲ್ಲಿ  ನವಯುಗ ಸೃಷ್ಟಿಸಲು ಸರಕಾರಕ್ಕೆ ಸಾಧ್ಯವಾಗಲಿದೆ ಎಂದು ಅವರು ಇದೇ ಸಂದರ್ಭ ಭರವಸೆ ನೀಡಿದರು.
   ಕಾಸರಗೋಡು ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು , ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು, ಮಾಜಿ ಶಾಸಕ ಕೆ.ವಿ.ಕುಂಞಿರಾಮನ್, ಜಿಲ್ಲಾ  ಪಂಚಾಯತ್ ಸ್ಥಾಯೀ ಸಮಿತಿಯ ಅಧ್ಯಕ್ಷ  ಶಾನವಾಸ್ ಪಾದೂರು, ಕಾಂಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ  ಎಂ.ಗೌರಿ, ಉದುಮ, ಪಳ್ಳಿಕೆರೆ, ಚೆಮ್ನಾಡು ಗ್ರಾಮ ಪಂಚಾಯತ್ಗಳ ಅಧ್ಯಕ್ಷರು, ಜಿಲ್ಲಾ , ಬ್ಲಾಕ್, ಗ್ರಾಮ ಪಂಚಾಯತ್ಗಳ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು.
   ಉದುಮ ಶಾಸಕ ಕೆ.ಕುಂಞಿರಾಮನ್ ಸ್ವಾಗತಿಸಿ, ಕೇರಳ ರಾಜ್ಯ ಟೆಕ್ಸ್ಟೈಲ್ಸ್ ಕಾಪರ್ೋರೇಶನ್ ಲಿಮಿಟೆಡ್ನ ಅಧ್ಯಕ್ಷ  ಸಿ.ಆರ್.ವತ್ಸನ್ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries