ಕಾಸರಗೋಡು: 60ನೇ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ನೇತೃತ್ವದಲ್ಲಿ ನ.28 ರಿಂದ ಡಿ.ಒಂದರ ವರೆಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದರ ಅಂಗವಾಗಿ ನ.28ರಂದು ಸಂಜೆ 4 ಗಂಟೆಗೆ ಕಾ ಞÂ ಂಗಾಡ್ ಅಲಮಿಪಳ್ಳಿ ಬಸ್ ನಿಲ್ದಾಣದ ಮುಕ್ತ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಜರುಗಲಿದೆ.
ಕಾಸರಗೋಡು ಜಿಲ್ಲಾ ಶಿಕ್ಷಣ ನಿರ್ದೇಶಕರ ಛೇಂಬರ್ ನಲ್ಲಿ ಸೋಮವಾರ ನಡೆದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಘೊಳ್ಳಲಾಗಿದೆ. ತುಳು ಜಾನಪದ ವೈವಿಧ್ಯಗಳು, ಸಾಹಿತ್ಯ ಸಂಜೆ, ಕವಿಗೋಷ್ಠಿ, ಸಾಂಸ್ಕೃತಿಕ ಸಮ್ಮೇಳನ ಇತ್ಯಾದಿ ನಡೆಸುವುದಾಗಿ ಸಭೆ ರೂಪುರೇಷೆ ರಚಿಸಿದೆ. ಸಮಿತಿ ಅಧ್ಯಕ್ಷ ಟಿ.ಎಂ.ಎ.ಲತೀಫ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ.ಎನ್.ಎ.ಸುಧೀಷ್ ಕುಮಾರ್, ಕಾಸರಗೋಡು ಜಿಲ್ಲಾ ಶಿಕ್ಷಣನಿರ್ದೇಶಕಿ ಕೆ.ವಿ.ಪುಷ್ಪಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ವಿ.ಇಂದುಲಾಲ್, ಎಂ.ಟಿ.ಅಣೂರು, ಕೆ.ಸಿ.ಸತೀಶನ್, ಡಯಟ್ ಫ್ಯಾಕ್ವೆಲ್ಟಿ ಸದಸ್ಯ ವಿನೋದ್ ಕುಮಾರ್ ಪೆರುಂಬಳ, ರಾಮಕೃಷ್ಣನ್ ಮೋನಚ್ಚ, ಷೀಜಾ ಮೊದಲಾದವರು ಉಪಸ್ಥಿತರಿದ್ದರು.


