HEALTH TIPS

ಜಲಾಂತಂಕ ಬೇಡ- ತಡೆಗೋಡೆ- ಅಕಾಲಿಕ ಮಳೆಯಿಂದ ಅಂತರ್ಜಲ ಹೆಚ್ಚಳ


       ಬದಿಯಡ್ಕ: ಹವಾಮಾನ ಬದಲಾವಣೆ ಸೇರಿದಂತೆ ಸವಾಲುಗಳು ಎದುರಿಸುವ ಸಲುವಾಗಿ ನೀರಿನ ಸಂಪನ್ಮೂಲಗಳನ್ನು ಮರು ಸ್ಥಾಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಜಲ ಸಂರಕ್ಷಣಾ ಉಪಕ್ರಮಗಳು ಯಶಸ್ವಿಯಾಗಿವೆ.
       ನೀರಿನ ಹರಿವು ತಡೆಗಟ್ಟಲು ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಮತ್ತು ಹಸಿರು ಕೇರಳ ಮಿಷನ್ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಹಲವಾರು ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲೆಯ ಬಾವಿಗಳಲ್ಲಿನ ನೀರಿನ ಮಟ್ಟ ಹಿಂದಿನ ವರ್ಷಗಳಿಗಿಂತ ವೃದ್ಧಿಯಾಗಿದೆ. ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ ಫೆಬ್ರವರಿ ತಿಂಗಳಲ್ಲಿ ಜಿಲ್ಲಾ ಜಲ ಸಂಪನ್ಮೂಲ ಇಲಾಖೆ ನಿಗಾದಲ್ಲಿರುವ 66 ಬಾವಿಗಳಿಗೆ ಹೋಲಿಸಿದರೆ ಕೇವಲ 36ರಷ್ಟು ಬಾವಿಗಳಲ್ಲಿಮಾತ್ರ ನೀರು ಕುಸಿತ ಕಂಡುಬಂದಿರುವುದು. ಇದು ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ತಿಳಿಸಿರುವರು. ಜಿಲ್ಲಾಡಳಿತ ಕಳೆದ ನವೆಂಬರ್‍ನಲ್ಲಿ ತಡೆಗೋಡೆ ನಿರ್ಮಿಸುವಂತೆ ನಿರ್ದೇಶನ ನೀಡಿತ್ತು ಮತ್ತು ಅದನ್ನು ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಜಾರಿಗೆ ತಂದವು ಎಂಬುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
      ಜಲ ಸಂಪನ್ಮೂಲ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ಕೆ.ಎಂ. ಅಬ್ದುಲ್ ಅಶ್ರಫ್ ಪ್ರಕಾರ, ಕಳೆದ ವರ್ಷದ ಅತ್ಯಧಿಕ ಕುಸಿದ 3.67 ಮೀಟರ್ ಆದರೆ, ಅದು ಈ ವರ್ಷ 2.92 ಮೀಟರ್ ಮಾತ್ರವಾಗಿದೆ. 2019ರಲ್ಲಿಶೇ. 65 ಬಾವಿಗಳಲ್ಲಿಜಲಮಟ್ಟ ಕಡಿಮೆಯಾಗಿತ್ತು. ಪ್ರಸ್ತುತ ಅದು ಶೇ. 36 ಮಾತ್ರವಾಗಿದೆ. ಜಿಲ್ಲೆಯಲ್ಲಿ33 ಬಾವಿಗಳು ಮತ್ತು 33 ಕೊಳವೆ ಬಾವಿಗಳನ್ನು ನಿರೀಕ್ಷಣೆಗಾಗಿ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ನಿರೀಕ್ಷಣಾ ಬಾವಿಗಳಲ್ಲಿಒಂದು ಸಂಪೂರ್ಣ ಬತ್ತಿ ಹೋಗಿತ್ತು. ಬದಿಯಡ್ಕ ಗ್ರಾ.ಪಂ ನ ಬೆಳಿಂಜದಲ್ಲಿ ನಿರೀಕ್ಷಣೆಯಲ್ಲಿದ್ದ  ಬಾವಿಯಲ್ಲಿ1.37 ಮೀಟರ್ ನೀರಿನ ಏರಿಕೆ ಏರುವುದಾಗಿ ತಿಳಿಸಿದರು.
         ಡಿಸೆಂಬರ್‍ನಿಂದ 2800 ತಡೆಗೋಡೆ:
   ಮಣ್ಣಿನ ಮತ್ತು ಜಲ ಸಂರಕ್ಷಣಾ ಉಪಕ್ರಮದ ಅಂಗವಾಗಿ ಕಳೆದ ಡಿಸೆಂಬರ್‍ನಿಂದ ಜಿಲ್ಲೆಯಲ್ಲಿ ಸುಮಾರು 2800 ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ಹಸಿರು ಕೇರಳ ಮಿಷನ್ ಜಿಲ್ಲಾಸಂಯೋಜಕ ಎ.ಪಿ. ಸುಬ್ರಮಣಿಯನ್ ತಿಳಿಸಿದ್ದಾರೆ. ಅಧಿಕವಾಗಿ ಲಭಿಸುವ ಮಳೆ ನೀರನ್ನು ಭೂಮಿಯೊಳಗೆ ಸೇರುವಂತೆ ಮಾಡಲು ತಡೆಗೋಡೆಗಳು ಸಹಾಯಕವಾಗಿದೆ. ಹಸಿರು ಕೇರಳ ಮಿಷನ್‍ನ 'ಇನ್ನು ನಾನು ಹರಿಯಲೇ' ಎಂಬ ಯೋಜನೆಯ ಅಂಗವಾಗಿ 38 ತೋಡುಗಳನ್ನು ಪುನರ್ ನಿರ್ಮಿಸಲಾಗಿದೆ. ಇದರಲ್ಲಿ93 ಕಿ.ಮೀ.ನಷ್ಟು ಉದ್ದಕ್ಕೆ ನೀರು ಹರಿಯುವಂತೆ ಮಾಡಲಾಗಿದೆ.
       ಜಿಲ್ಲೆಯಲ್ಲಿ4185.74 ಮಿ.ಮೀ. ಮಳೆ:
    ಜಿಲ್ಲೆಯಲ್ಲಿಭಾರಿ ಮಳೆಯಾಗಿರುವುದು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ. ಫೆಬ್ರವರಿ 13ರವರೆಗೆ ಜಿಲ್ಲೆಯಲ್ಲಿ4185.74 ಮಿ.ಮೀ. ಮಳೆಯಾಗಿದೆ. ಈಶಾನ್ಯ ಮಾನ್ಸೂನ್ ಹಿಂದಿನ ವರ್ಷಕ್ಕಿಂತ ಹೆಚ್ಚಿಗೆ ಲಭಿಸಿದೆ. 2019ರ ಜೂ.1ರಿಂದ ಡಿಸೆಂಬರ್ ತನಕ ಜಿಲ್ಲೆಯಲ್ಲಿ4051 ಮಿ.ಮೀ ಮುಂಗಾರು ಮಳೆ ಲಭಿಸಿದೆ. ಕೋಝಿಕೋಡ್ ಹೊರತುಪಡಿಸಿದರೆ ರಾಜ್ಯದಲ್ಲಿಕಾಸರಗೋಡು ಜಿಲ್ಲೆಯಲ್ಲಿಗರಿಷ್ಠ ಮಳೆ ಲಭಿಸಿದೆ. ಅದೇ ಸಂದರ್ಭ 2018ರ ಮೇ 30ರಿಂದ 2019ರ ಮೇ 31ರವರೆಗೆ ಜಿಲ್ಲೆಯಲ್ಲಿ3223.34 ಮಿ.ಮೀ. ಮಳೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries