ಕುಂಬಳೆ: ಹಿರಿಯ ರಂಗನಟ, ನಿರ್ದೇಶಕ, ನಿರೂಪಕ ಸದಾಶಿವ (ಸದಾನಂದ ಆರಿಕ್ಕಾಡಿ) ಅವರ ನಿಧಕ್ಕೆ ಸಂತಾಪ ಸೂಚಕ ಸಭೆ ಮಾ.15 ರಂದು ಸಂಜೆ 4 ಗಂಟೆಗೆ ಕುಂಬಳೆ ಪೇಟೆಯ ರೈಲ್ವೇ ನಿಲ್ದಾಣ ಬಳಿಯ ಶ್ರೀ ಸದ್ಗುರು ನಿತ್ಯಾನಂದ ಸ್ವಾಮಿ ಮಠದಲ್ಲಿ ನಡೆಯಲಿದೆ.
ಸದಾನಂದ ಆರಿಕ್ಕಾಡಿ ಅವರು ಸುಮಾರು 2 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟರಾಗಿ, ನಿರ್ದೇಶಕರಾಗಿ, ನಿರೂಪಕರಾಗಿ ಗುರುತಿಸಲ್ಪಟ್ಟವರು ಹಾಗೂ ರಂಗಭೂಮಿ ಹೊರತಾಗಿ ಧಾರ್ಮಿಕ, ಸಾಂಸ್ಕøತಿಕ, ಭಜನೆ ಇನ್ನಿತರ ಕಾರ್ಯಕ್ರಮಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಸದಾನಂದ ಆರಿಕ್ಕಾಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಮಾ.15 ರಂದು ಸಂಜೆ 4 ಗಂಟೆಗೆ ಕುಂಬಳೆ ಪೇಟೆಯ ರೈಲ್ವೇ ನಿಲ್ದಾಣ ಬಳಿ ಇರುವ ಶ್ರೀ ಸದ್ಗುರು ನಿತ್ಯಾನಂದ ಸ್ವಾಮಿ ಮಠದಲ್ಲಿ ಜರಗಲಿದೆ.


