ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್ನ 12ನೇ ವಾರ್ಷಿಕ ದಿನಾಚರಣೆ ಮಾ 2ರಂದು ಬೆಳಗ್ಗೆ 11ಕ್ಕೆ ಕೇಂದ್ರೀಯ ವಿಶ್ವ ವಿದ್ಯಾಲಯದ ಚಂದ್ರಗಿರಿ ತೆರೆರದ ಸಭಾಂಗಣದಲ್ಲಿ ಜರಗಲಿದೆ.
ಕೇರಳದ ರಾಜ್ಯಪಾಲ ಆರಿಫ್ಮಹಮ್ಮದ್ ಖಾನ್ ಸಂಸ್ಥಾಪನಾ ದಿನದ ಮುಖ್ಯ ಭಾಷಣ ಮಾಡಿ, ವಿಶ್ವ ವಿದ್ಯಾಲಯ ಕ್ಯಾಂಪಸ್ನಲ್ಲಿ ಕೆಲಸಪೂರ್ತಿಗೊಂಡಿರುವ ಅತಿಥಿಗೃಹ 'ನೀಲಗಿರಿ 'ಯನ್ನು ಲೋಕಾರ್ಪಣೆಗೈಯುವರು. ಕೇಂದ್ರ ವಿದೇಶಾಂಗ ಹಾಗೂ ಸಂಸದೀಯ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ವಿಶ್ವ ವಿದ್ಯಾಲಯ ಉಪಕುಲಪತಿ ಪ್ರೊ. ಎಚ್.ವೆಂಕಟೇಶ್ವರಲು, ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್, ಡೀನ್ ಕೆ.ಪಿ ಸುರೇಶ್ ಮುಂತಾದವರು ಪಾಳ್ಗೊಳ್ಳುವರು.
ಕ್ಯಾಂಪಸ್ನೊಳಗೆ ಸುಮಾರು 10.13ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಿಸಲಾಗಿದ್ದು, ನಾಲ್ಕು ವಿಐಪಿ ಕೊಠಡಿ, 21ವಾತಾನುಕೂಲಿತ ಕೊಠಡಿ, ಕಚೇರಿ, 50ಮಂದಿಗೆ ಕುಳಿತುಕೊಳ್ಳಬಹುದಾದ ಸಭಾಂಗಣ ಒಳಗೊಂಡ ಎರಡಂತಸ್ತಿನ ಕಟ್ಟಡ ಇದಾಗಿದೆ.