ಮಂಜೇಶ್ವರ: ಸ್ವೀಪ್ ವತಿಯಿಂದ ಮಂಜೇಶ್ವರ ವಿಧಾನಸಭೆ ಕ್ಷೇತ್ರ ಮಟ್ಟದ ಮತದಾತರ ಜಾಗೃತಿ ಕಾರ್ಯಕ್ರಮ ಹೊಸಂಗಡಿಯಲ್ಲಿ ಶನಿವಾರ ಜರಗಿತು.
ಮಂಜೇಶ್ವರ ಆಹಾರ ಮತ್ತು ಸುರಕ್ಷೆ ಅಧಿಕಾರಿ ಮುಸ್ತಫಾ ಕೆ.ಪಿ. ಉದ್ಘಾಟಿಸಿದರು. ಮಂಜೇಶ್ವರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ, ಸ್ವೀಪ್ ವಿಧಾನಸಭೆ ಕ್ಷೇತ್ರ ಸಮಿತಿ ಅಧ್ಯಕ್ಷೆ ಜ್ಯೋತಿ ಪಿ. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಎಚ್.ಎ. ರಜೀಷ್, ಐ.ಸಿ.ಡಿ.ಸಿ.ಎಸ್. ಮೇಲ್ವಿಚಾರಕಿಯರಾದ ಆಶಾ, ಶೀನಾ, ಷೀಬಾ ಉಪಸ್ಥಿತರಿದ್ದರು. ಕಾರ್ಯಕ್ರಮ ಅಂಗವಾಗಿ ಸ್ವೀಪ್ ಸಹಾಯ ಡೆಸ್ಕ್, ಮತದಾರ ವೃಕ್ಷ, ಸಹಿಮರ, ಯಥಾಸಮಯ ಸಂವಾದ ಇತ್ಯಾದಿ ಜರಗಿದವು. ಶಾಲೆ ಕೌನ್ಸಿಲರ್ ಗಳು, ಎನ್.ಎನ್.ಎಂ. ಸಂಚಾಲಕರು, ಅಂಗನವಾಡಿ ಕಾರ್ಯಕರ್ತರು ಮೊದಲಾದವರ ನೇತೃತ್ವದಲ್ಲಿ ಜನಜಾಗೃತಿ ಸ್ಕಿಟ್ ಜರಗಿತು.