ಕಾಸರಗೋಡು: ಅಸೌಖ್ಯ ಬಾಧಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಾಸರಗೋಡಿನ ಹಿರಿಯ ವೈದ್ಯ, ಮಕ್ಕಳ ರೋಗ ತಜ್ಞ, ಬದಿಯಡ್ಕ ಪಟ್ಟಾಜೆ ನಿವಾಸಿ ಡಾ. ಪಿ.ಎಸ್. ನರಸಿಂಹ ಭಟ್(70)ಶನಿವಾರ ನಿಧನರಾದರು. ಜಿಲ್ಲೆಯ ಮಕ್ಕಳ ತಜ್ಞರಲ್ಲಿ ಉತ್ತಮ ಹೆಸರು ದಾಖಲಿಸಿಕೊಂಡಿದ್ದ ಇವರು ಕಳೆದ 42ವರ್ಷಗಳಿಂದ ಕಾಸರಗೋಡಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.