ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ಮಂಜೇಶ್ವರ ಉಪಜಿಲ್ಲಾ ಸಮಿತಿಯ ಆಶ್ರಯದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ಜರಗಿತು. ಸನಾತನ ಹಿಂದೂ ಪರಂಪರೆಯಲ್ಲಿ ಅನಾದಿಕಾಲದಿಂದಲೂ ಆಷಾಢ ಹುಣ್ಣಿಮೆ ದಿನದಂದು ಬಹಳ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲ್ಪಡುತ್ತಿರುವ ಗುರುವಂದನಾ ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ಪೈವಳಿಕೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ ಪಂಚಾಯತಿ ಮಟ್ಟದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಮಾರ್ಗದರ್ಶಕರಾಗಿ ಸಮಾಜ ಸೇವೆಯೊಂದಿಗೆ ಪ್ರೇರಣಾದಾಯಿ ಜೀವನ ನಡೆಸುತ್ತಿರುವ ದೈಗೋಳಿ ಸಾಯಿನಿಕೇತನ ಸೇವಾಶ್ರಮದ ಡಾ.ಉದಯಕುಮಾರ್ ಭಟ್(ವರ್ಕಾಡಿ) ಬಾಯಾರು ಶ್ರೀ ಪಂಚಲಿಂಗೇಶ್ವರ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎನ್. ಶ್ಯಾಮ್ ಭಟ್ ಪೈವಳಿಕೆ, ಕುಬಣೂರು ಶ್ರೀ ರಾಮ ಎ.ಯು.ಪಿ ಶಾಲೆಯ ನಿವೃತ್ತ ಅಧ್ಯಾಪಕ ಎಮ್. ವಿಶ್ವನಾಥ ಆಳ್ವ ಮಂಗಲ್ಪಾಡಿ. ಮೀಯಪದವು ಶಾಲಾ ಸಂಚಾಲಕಿ ಪ್ರೇಮಾ ಕೆ.ಭಟ್ ಮೀಂಜ, ಉದ್ಯಾವರ ಭಗವತಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಕುಸುಮಾ ಟೀಚರ್ (ಮಂಜೇಶ್ವರ) ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಟಿ.ಯು ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ, ಪದಾಧಿಕಾರಿಗಳಾದ ಚಂದ್ರಿಕಾ ಟೀಚರ್, ರಘವೀರ್ ರಾವ್, ಈಶ್ವರ್ ಕಿದೂರು, ಜಯರಾಮ, ದೇವಿಪ್ರಸಾದ್, ಶ್ರೀಧರ ಭಟ್, ಸೀತಾರಾಮ, ಮೀರಾ ಆಳ್ವ, ನಾರಾಯಣ್ ರಾಜ್, ಬಾಲಕೃಷ್ಣ, ಲಕ್ಷೀಶ, ಹರಿದಾಸ್, ಹರಿಣಾಕ್ಷಿ ಟೀಚರ್, ವೀಣಾ ಟೀಚರ್ ಮತ್ತಿತರು ಉಪಸ್ಥಿತರಿದ್ದರು.