ಮಂಜೇಶ್ವರ: ಉದ್ಯಾವರ ರಾ.ಹೆದ್ದಾರಿ ಅಂಡರ್ ಪಾಸ್ ಬೇಡಿಕೆಗಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿμÁ್ಟವಧಿ ಧರಣಿ ಸತ್ಯಾಗ್ರಹ 11 ಯಶಸ್ವಿಯಾಗಿ ಪೂರ್ತಿಗೊಂಡಿದೆ. ಹೋರಾಟ ಸಮಿತಿಯ ನೇತಾರ ಸಂಜೀವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 11 ನೇ ದಿನದ ಧರಣಿ ಸತ್ಯಾಗ್ರಹವನ್ನು ಉದ್ಯಾವರ ಶ್ರೀ ಅರಸು ಮಂಜಿμÁ್ಟರ್ ಕ್ಷೇತ್ರದ ಪಾತ್ರಿ ರಾಜ ಬೆಲ್ಚಾಡ ಅವರು ಉದ್ಘಾಟಿಸಿದರು.
ಈ ಸಂದರ್ಭ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ ಕುಟುಂಬ ಶ್ರೀ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಕುಂಜತ್ತೂರಿನಲ್ಲಿ ಸತ್ಯಾಗ್ರಹ ನಡೆಸಿ 5 ದಿನದೊಳಗೆ ಅಂಡರ್ ಪಾಸ್ ಗೆ ಹಸಿರು ನಿಶಾನೆ ತೋರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉದ್ಯಾವರದ ಅಂಡರ್ ಪಾಸ್ ಗಾಗಿ 11 ದಿನ ಕಳೆದರೂ ಯಾವೊಂದು ಪ್ರತಿಕ್ರಿಯೆಯನ್ನು ನೀಡದಿರುವುದು ಸ್ಥಳೀಯರಲ್ಲಿ ಆಕ್ರೋಶ ಹೆಚ್ಚಿಸಿದೆ.
ಹೋರಾಟ ಸಮಿತಿ ನೇತಾರರಾದ ದಯಾಕರ್ ಮಾಡ, ಜಬ್ಬಾರ್ ಪದವು, ಹಸೈನಾರ್, ಹನೀಫ್ ಕುಚ್ಚಿಕ್ಕಾಡ್, ರಹ್ಮತ್ ಮೊದಲಾದವರು ನೇತೃತ್ವ ನೀಡಿದರು. ಕುಟುಂಬಶ್ರೀ ಅಧ್ಯಕ್ಷೆ ಜಯಶ್ರೀ, ವಾರ್ಡ್ ಸದಸ್ಯೆ ಕುಲ್ಸುಮ್ಮ, ಸೌದಿ ಕೆ ಎಂ ಸಿ ಸಿ ನೇತಾರ ಬಾಬಾ ತೂಮಿನಾಡು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಉದ್ಯಾವರ ರಾ.ಹೆದ್ದಾರಿ ಅಂಡರ್ ಪಾಸ್ ಬೇಡಿಕೆ: 11 ದಿನ ಕಳೆದ ಧರಣಿ
0
ಅಕ್ಟೋಬರ್ 13, 2022
Tags




.jpg)
