ಕುಂಬಳೆ: “ಧರ್ಮವೇ ಸಂಪ್ರದಾಯ” ಎಂಬ ಶೀರ್ಷಿಕೆಯಡಿಯಲ್ಲಿ ಎಸ್ ವೈಎಸ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಆದರ್ಶ ಅಭಿಯಾನದ ಅಂಗವಾಗಿ ಕುಂಬೋಳ್ ವಲಯ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯಿತು. ಆರಿಕ್ಕಾಡಿ ಪಿ.ಎ.ಉಸ್ತಾದ್ ನಗರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸ್ವಾಗತ ತಂಡದ ಅಧ್ಯಕ್ಷ ಅಶ್ರಫ್ ಸಅದಿ ಧ್ವಜಾರೋಹಣ ನಿರ್ವಹಿಸಿದರು. ಎಸ್ವೈಎಸ್ ಕುಂಬಳೆ ವಲಯಾಧ್ಯಕ್ಷ ಸಯ್ಯಿದ್ ಹಮೀದ್ ಅನ್ವರ್ ಅಹ್ದಲ್ ತಂಙಳ್ ಉದ್ಘಾಟಿಸಿದರು. ಮುಖ್ಯ ಭಾಷಣಕಾರ ವಹಾಬ್ ಸಖಾಫಿ ಧಾರ್ಮಿಕ ಭಾಷಣ ಮಾಡಿದರು. ಕುಂಬಳೆ ವಲಯ ಕಾರ್ಯದರ್ಶಿ ಹನೀಫ್ ಸಅದಿ ಕುಂಬೋಳ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಅಬ್ದುಲ್ ಕರೀಂ ಅಲ್ ಹಾದಿ, ಸೈಯದ್ ತ್ವಾಹ ಬಾಫಕಿ ತಂಙಳ್ ಕೊಯಿಲಾಂಡಿ, ಎಸ್ ಎಂಎ ಜಿಲ್ಲಾ ಕಾರ್ಯದರ್ಶಿ ವೈ.ಎಂ ಅಬ್ದುಲ್ ರಹ್ಮಾನ್ ಅಹ್ಸನಿ, ಕೇರಳ ಮುಸ್ಲಿಂ ಜಮಾತ್ ಕುಂಬಳೆ ವಲಯ ಅಧ್ಯಕ್ಷ ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ಸಾರ್ವಜನಿಕ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ, ಎಸ್.ವೈ.ಎಸ್. ಜಿಲ್ಲಾ ಖಜಾಂಜಿ ಅಬ್ದುಲ್ ಕರೀಂ ಮಾಸ್ತರ್ ದರ್ಬಾರ್ ಕಟ್ಟೆ, ಕುಂಬಳೆ ವಲಯ ಕಾರ್ಯದರ್ಶಿ ಅಬ್ದುಸ್ ಸಲಾಂ ಸಖಾಫಿ ಪಾತಲಡ್ಕ, ಹಣಕಾಸು ಕಾರ್ಯದರ್ಶಿ ಸಿದ್ದೀಕ್ ಪಿ.ಕೆ.ನಗರ, ಪ್ರಭಾರಿಗಳಾದ ಅಶ್ರಫ್ ಸಖಾಫಿ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಚೆನ್ನಾರ್, ಎಸ್.ಎಸ್.ಎಫ್ ಕುಂಬಳೆ ವಿಭಾಗ ಅಧ್ಯಕ್ಷ ಮಿಖಾದಾದ್, ರಾಜಕೀಯ ಮುಖಂಡರಾದ ಹಿಮಾಮಿ ಉಪಸ್ಥಿತರಿದ್ದರು. ಅಶ್ರಫ್ ಸಖಾಫಿ ಸ್ವಾಗತಿಸಿ, ಮುಹಮ್ಮದ್ ಕುಂಞÂ ಉಳುವಾರ್ ವಂದಿಸಿದರು.
ರಾಜ್ಯದ 600 ಕೇಂದ್ರಗಳಲ್ಲಿ ನಡೆದ ಆದರ್ಶ ಸಮ್ಮೇಳನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಸ್.ವೈ.ಎಸ್ ಆದರ್ಶ ಅಭಿಯಾನ ಮುಕ್ತಾಯ
0
January 09, 2023