HEALTH TIPS

'ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ತೀರ್ಪು ನೀಡದಂತೆ ಒತ್ತಡ ಇತ್ತು'

                ಮೀರಠ್‌: 'ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪು ನೀಡದಂತೆ ನನ್ನ ಮೇಲೆ ಭಾರಿ ಒತ್ತಡವಿತ್ತು' ಎಂದು ನಿವೃತ್ತ ನ್ಯಾಯಮೂರ್ತಿ ಸುಧೀರ್‌ ಅಗರ್ವಾಲ್‌ ಹೇಳಿದ್ದಾರೆ.

            2010ರ ಸೆಪ್ಟೆಂಬರ್‌ 30ರಂದು ಈ ವಿವಾದಕ್ಕೆ ಸಂಬಂಧಿಸಿ ಮಹತ್ತರ ತೀರ್ಪು ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಪೀಠದಲ್ಲಿದ್ದ ನ್ಯಾಯಾಧೀಶರಲ್ಲಿ ಇವರೂ ಒಬ್ಬರಾಗಿದ್ದರು.

             ಮೀರಠ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದ ತೀರ್ಪನ್ನು ಮುಂದೂಡುವಂತೆ ಮನೆಯಿಂದ ಮತ್ತು ಮನೆಯ ಹೊರಗೆ ನನಗೆ ಒತ್ತಡ ಹೇರಲಾಗುತ್ತಿತ್ತು. ಆ ತೀರ್ಪನ್ನು ಆಗ ನೀಡದಿದ್ದರೆ ಬಹುಶಃ ಇನ್ನೂ 200 ವರ್ಷಗಳ ಕಾಲ ಆ ವಿವಾದವನ್ನು ಎಳೆದಾಡಲಾಗುತ್ತಿತ್ತು. ಆ ತೀರ್ಪನ್ನು ಪ್ರಕಟಿಸಿದ ಬಳಿಕ ದೈವಕೃಪೆಗೆ ಒಳಗಾದಂತೆ ಭಾಸವಾಯಿತು' ಎಂದು ಹೇಳಿದರು.

                 ಅಯೋಧ್ಯೆಯಲ್ಲಿದ್ದ ವಿವಾದಿತ 2.77 ಎಕರೆ ಭೂಮಿಯನ್ನು ಸುನ್ನಿ ವಖ್ಫ್‌ ಮಂಡಳಿ, ನಿರ್ಮೋಹಿ ಆಕಾರ ಮತ್ತು ಹಿಂದೂ ಮಹಾಸಭೆ ಪ್ರತಿನಿಧಿಸುವ ರಾಮ್‌ ಲಲ್ಲಾಗೆ ಸಮನಾಗಿ ಹಂಚಿ ಈ ತೀರ್ಪನ್ನು ನೀಡಲಾಗಿತ್ತು. ಈ ತೀರ್ಪು ನೀಡಿದ್ದ ನ್ಯಾಯಪೀಠದಲ್ಲಿ ಎಸ್‌.ಯು. ಖಾನ್‌, ಸುಧೀರ್‌ ಅಗರ್ವಾಲ್‌ ಮತ್ತು ಡಿ.ವಿ. ಶರ್ಮಾ ಇದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries