HEALTH TIPS

ಬೆಳ್ಳೂರು ಲಕ್ಷದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

            ಮುಳ್ಳೇರಿಯ:  ಜಗದಗಲ ಸಾಮರಸ್ಯದ ಬೆಳಕ ಚೆಲ್ಲಿದ ದೇಶ ನಮ್ಮದು. ಇಲ್ಲಿನ ಸಂಸ್ಕøತಿ, ಸಂಪ್ರದಾಯ, ಆಚಾರ ವಿಚಾರ ನಂಬಿಕೆಗಳಲ್ಲಿ ಇರುವ ಅರಿವಿನ ಬೆಳಕು ಇಂದು ಪ್ರತಿ ಭಾರತೀಯ ಹಿಂದೂ ಬಾಂಧವರ ಕನಸನ್ನು ನನಸಾಗಿಸಿದೆ. ಶ್ರೀರಾಮನ ಭೂಮಿಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಸತ್ಯ, ನಿಷ್ಠೆಗಳನ್ನೊಳಗೊಂಡ ನಮ್ಮ ಧರ್ಮದ ಶಕ್ತಿ, ಯುಕ್ತಿಯ ಬೆಳಕು ಪ್ರಜ್ವಲಿಸುವ ಸಮಯ ಸನ್ನಿಹಿತವಾಗಿದೆ. ಈ ಸಂಭ್ರಮವನ್ನು, ಭಕ್ತಿಯ, ಐಕ್ಯತೆಯ ದೀಪಗಳ ಬೆಳಗುವ ಮೂಲಕ ಆಚರಿಸಲು ಬೆಳ್ಳೂರು ಶ್ರೀ ಮಹಾವಿಷ್ಣು ಆಡಳಿತ ಸಮಿತಿ ಮತ್ತು ಭಕ್ತವೃಂದ,  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ವಾಧೀಶ ರಾಮಕೃಷ್ಣ ಕಾಟುಕುಕ್ಕೆ ಶಿಷ್ಯ ವೃಂದ ಜಂಟಿ ಆಶ್ರಯದಲ್ಲಿ ನಡೆಸಲು ಮುಂದಾಗಿದ್ದಾರೆ. ಆದುದರಿಂದ  ಜ.22 ರಂದು ಬೆಳ್ಳೂರು ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಜರಗುವ  ಲಕ್ಷ ದೀಪೆÇೀತ್ಸವವು ಹೆಚ್ಚು ಮಹತ್ವವನ್ನು  ಹೊಂದಿದೆ ಎಂದು ಖ್ಯಾತ ಉದ್ಯಮಿ ಕೊಡುಗೈ ದಾನಿ ಗೋಪಾಲಕೃಷ್ಣ ಪೈ ಅಭಿಪ್ರಾಯ ವ್ಯಕ್ತಪಡಿಸಿದರು . 

          ಅವರು ಬೆಳ್ಳೂರು ಲಕ್ಷದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಖ್ಯಾತ ಜ್ಯೋತಿಷಿ ಉಣ್ಣಿಕೃಷ್ಣನ್ ಅವರಿಗೆ ನೀಡಿ ಬಿಡುಗಡೆಗೊಳಿಸಿ ಮಾತನಾಡಿದರು.

                ಲಕ್ಷದೀಪೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಂ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ಗಂಗಾಧರ ಬಲ್ಲಾಳ್, ಕಲ್ಲಗ ಚಂದ್ರಶೇಖರ ರಾವ್, ಅಖಿಲೇಶ್ ನಗುಮುಗಂ, ಹರೇ ಕೃಷ್ಣ ಪುತ್ತೂರು, ಹರೀಶ್ ಗೋಸಾಡ, ವೆಂಕಟಕೃಷ್ಣ ಕಡಂಬಳಿತ್ತಾಯ, ಸಂತೋಷ್ ರೈ  ಗಾಡಿಗುಡ್ಡೆ, ಜಯಾನಂದ ಕುಳ, ರಾಘವೇಂದ್ರ ಎಸ್ ಮುಂತಾದವರು ಉಪಸ್ಥಿತರಿದ್ದರು. ಡಾ. ಮೋಹನ್ ದಾಸ್ ರೈ ಸ್ವಾಗತಿಸಿ, ಪ್ರದೀಪ್ ಕುಮಾರ್ ಪಿ ಬೆಳ್ಳೂರ್ ವಂದಿಸಿದರು. ಚಂದ್ರಶೇಖರ ಆಚಾರ್ಯ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries