ಪೆರ್ಲ: ಪೆರ್ಲ ನಾಲಂದ ಕಾಲೇಜು ಭೂಮಿತ್ರಸೇನ ಕ್ಲಬ್(ಬಿ.ಎಂ.ಸಿ.) ಮತ್ತು ಎನ್ನೆಸ್ಸೆಸ್ ಘಟಲ ಸಂಖ್ಯೆ - 49 ಜಂಟಿ ಆಶ್ರಯದಲ್ಲಿ ವಿಶ್ವ ಜಲ ದಿನ ಆಚರಿಸಲಾಯಿತು.
ಬಿ.ಎಂ.ಸಿ.ಸಂಯೋಜಕ ಮನೋಜ್ ಕುಮಾರ್ ಪಿ. ಅಧ್ಯಕ್ಷತೆ ವಹಿಸಿದ್ದರು. ಅಕೌಂಟೆನ್ಸಿ ವಿಭಾಗದ ಸಹ ಪ್ರಾಧ್ಯಾಪಕ ನಿತಿನ್ ಕುಮಾರ್ ಆರ್.ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಿಹಿನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಪ್ರತಿಪಾದಿಸಲು ಜಲ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಕಾವ್ಯಚಂದ್ರನ್ ನೀರನ್ನು ಸಂರಕ್ಷಿಸುವ ಅಗತ್ಯದ ಕುರಿತು ತಿಳಿಸಿದರು. ಬಿ.ಎಂ.ಸಿ.ನಾಯಕಿ ಸಿಂಧು ಸ್ವಾಗತಿಸಿದರು. ಎನ್ನೆಸ್ಸೆಸ್ ಸ್ವಯಂಸೇವಕಿ ಅನನ್ಯಾ ಕೆ.ವಂದಿಸಿದರು. ತ್ರಿಷಾ ನಿರೂಪಿಸಿದರು.