ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಆಶ್ರಯದಲ್ಲಿ ಮಾನ್ಯದಲ್ಲಿ ನಡೆದ ಮಹಾತ್ಮಾ ಗಾಂಧಿ ಕುಟುಂಬ ಸಂಗಮದಲ್ಲಿ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಿ.ಕೆ.ಫೈಝಲ್ ಅವರು ಹಿರಿಯ ಕಾಂಗ್ರೆಸ್ ನೇತಾರ ಹಾಗೂ ಕಾರ್ಯಕರ್ತರಾದ ಪಿ.ಎಂ.ವೆಂಕಪ್ಪು ನಾಯ್ಕ್ ಕಲ್ಲಕಟ್ಟ, ಕೇಶವ ನಾಯ್ಕ್ ಉಳ್ಳೋಡಿ, ಚನಿಯಪ್ಪ ನಾಯ್ಕ್ ಕಾರ್ಮಾರ್, ಕುಂಚಪ್ಪ ನಾಯ್ಕ್. ಮೇಗಿನಡ್ಕ,. ಮೊಹಮ್ಮದ್ ಮಾನ್ಯ. ಶಾರದಾ ಮೇಗಿನಡ್ಕ.ದೂಜ ಕ್ರಾಸ್ತಾ ಕಾರ್ಮಾರ್, ರಾಮ ಮೂಲ್ಯ ಮಾನ್ಯ, ಅಬ್ದುಲ್ಲ ಮಾನ್ಯ, ಕೃಷ್ಣ ನಾಯ್ಕ್ ದೇವರಕೆರೆ. ಕೃಷ್ಣ ಮಣಿಯಾಣಿ ಉಳ್ಳೋಡಿ ಹಾಗೂ ವಾರ್ಡ್ ಸದಸ್ಯೆ ಅನುಸೂಯ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಂ.ಸಿ.ಪ್ರಭಾಕರ್, ವಾಸುದೇವ ನಾಯರ್, ಮಂಡಲ ಅಧ್ಯಕ್ಷ ಶ್ಯಾಮ್ಪ್ರಸಾದ್ ಮಾನ್ಯ, ಕಾದರ್ ಮಾನ್ಯ, ನಿತ್ಯಾನಂದ ಎಂ.ಆರ್., ರಾಮ ಪಟ್ಟಾಜೆ, ಕೃಷ್ಣದಾಸ್ ಬೇಳ ವಾರ್ಡ್ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

.jpg)
