HEALTH TIPS

ಧರ್ಮಸ್ಥಳ ಸಹಿತ ಕ್ಷೇತ್ರಗಳ ನಕಲಿ ಆರೋಪದ ಹಿಂದೆ ಗೂಢಾಲೋಚನೆ: ಬಾಬು ರಾಜ್

ಬದಿಯಡ್ಕ: ಹಿಂದೂ ಸಂಸ್ಕøತಿಯನ್ನು ಹಾಳು ಮಾಡುವ ಉದ್ದೇಶದಿಂದ ಧರ್ಮಸ್ಥಳ ಸಹಿತ ಕ್ಷೇತ್ರಗಳ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದರ ಹಿಂದೆ ದೊಡ್ಡ ಗೂಢಾಲೋಚನೆಯಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬು ರಾಜ್ ಹೇಳಿದರು.

ಅವರು ಕುಂಬ್ಡಾಜೆ  ಪಂಚಾಯಿತಿ ಅಗಲ್ಪಾಡಿಯ ವಾರ್ಡು ಸಮಾವೇಶವನ್ನು ಪಡುಮೂಲೆಯಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ನಾವು ಅತ್ಯಂತ ಭಕ್ತಿಯಿಂದ ಆರಾದಿಸುವ ಮಂಜುನಾಥ ದೇವರ ಕ್ಷೇತ್ರವಿರುವ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸುಳ್ಳು ದೂರು ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಶಬರಿಮಲೆಯಲ್ಲೂ ಇದೇ ರೀತಿಯಲ್ಲಿ ಗಲಭೆ ಸೃಷ್ಟಿಸಿ ಹಿಂದುಗಳ ಧಾರ್ಮಿಕ ಭಾವನೆಯನ್ನು ಹಾಳುಗೇಡುವ ಕೆಲಸವನ್ನು ಮಾಡಿದ್ದಾರೆ. ಇದರ ಹಿಂದೆ ಸಿಪಿಎಂನ ಮತೀಯವಾದಿಗಳ ಕೈವಾಡವಿರುವುದಾಗಿ ಅವರು ಹೇಳಿದರು.

ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇರಳಾದ್ಯಂತ ಬಿಜೆಪಿ ಅತೀ ಹೆಚ್ಚು ಸೀಟುಗಳನ್ನು ಪಡೆಯಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆವಹಿಸಿ ಮಾತನಾಡಿದರು.

ಆರಂಭದಲ್ಲಿ ವಿದ್ಯಾಲಕ್ಷ್ಮೀ ರಾಷ್ಟ್ರಗೀತೆ ಹಾಡಿದರು. ರಾಘವೇಂದ್ರ ಮೈಲೊತ್ತೊಟ್ಟಿ ಸ್ವಾಗತಿಸಿ, ಅನು ಕುರಪ್ ವಂದಿಸಿದರು. ವಾರ್ಡು ಸದಸ್ಯೆ ಮೀನಾಕ್ಷಿ ಎಸ್. ವರದಿ ಮಂಡಿಸಿದರು. ವಾರ್ಡು ಸಂಚಾಲಕ ಅಂಬುಜಾಕ್ಷ ನಡುಮೂಲೆ ಉಪಸ್ಥಿತರಿದ್ದರು. ಶಿವಾನಂದ ನಡುಮೂಲೆ ಕಾರ್ಯಕ್ರಮ ನಿರೂಪಿಸಿದು.

ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ನೇತಾರ ಹರ್ಷ ಕುಣಿಕ್ಕುಳ್ಳಾಯ ಹಾಗೂ ವಾರ್ಡು ಸದಸ್ಯೆ ಮೀನಾಕ್ಷಿ ಎಸ್. ಅವರನ್ನು ಬಿಜೆಪಿ ವತಿಯಿಂದ ಗೌರವಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries