HEALTH TIPS

ಜಮ್ಮು ಕಾಶ್ಮೀರದ ಸೇನಾ ಶಿಬಿರದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿ ಸೈನಿಕ ಸಾವು

 ಭುವನೇಶ್ವರ : ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಸರ್ನಾ ಸೈನಿಕ ಶಿಬಿರದಲ್ಲಿ ಸೇವಾ ರೈಫಲ್‌ನಿಂದ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಸೈನಿಕರೊಬ್ಬರು ಮೃತಪಟ್ಟಿದ್ದಾರೆ.

ಭದೆರ್ವಾದ ಸರ್ನಾ ಸೈನಿಕ ಶಿಬಿರದಲ್ಲಿ ಗುಂಡು ಹಾರಿದ ಶಬ್ದವನ್ನು ಸಹೋದ್ಯೋಗಿಳೊಂದಿಗೆ ಕೇಳಿಸಿಕೊಂಡೆವು ಎಂದು ಸೈನಿಕರು ಹೇಳಿದ್ದಾರೆ.

ಗುಂಡು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೈನಿಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಬಿಸ್ವಾಲ್ ಹೇಳಿದ್ದಾರೆ.

ಮೃತಪಟ್ಟ ಸೈನಿಕ ಒಡಿಶಾದ ನಿವಾಸಿಯಾಗಿದ್ದಾನೆ. ಸೇವಾ ಬಂದೂಕಿನಲ್ಲಿದ್ದ ಕಾಡತೂಸುಗಳನ್ನು ತೆಗೆಯುವ ಸಂದರ್ಭದಲ್ಲಿ ಗುಂಡು ಹಾರಿದೆ ಎಂದು ಭದೇರ್ವಾದ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಶರ್ಮಾ ಪ್ರಾಥಮಿಕ ತನಿಖೆಯಲ್ಲಿ ಅಧೀಕೃತವಾಗಿ ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries