HEALTH TIPS

ಬ್ರಿಟಿಷರ ಆಳ್ವಿಕೆಗು ಮೊದಲೇ ಭಾರತೀಯರಲ್ಲಿ ಒಗ್ಗಟ್ಟು ಇತ್ತು: ಮೋಹನ್‌ ಭಾಗವತ್‌

ನಾಗ್ಪುರ: 'ಬ್ರಿಟಿಷರ ಆಳ್ವಿಕೆಗೂ ಮೊದಲು ಭಾರತೀಯರಲ್ಲಿ ಒಗ್ಗಟ್ಟು ಇರಲಿಲ್ಲ ಎಂದು ಮಹಾತ್ಮ ಗಾಂಧಿ ಅವರು ತಮ್ಮ 'ಹಿಂದ್‌ ಸ್ವರಾಜ್‌' ಪುಸ್ತಕದಲ್ಲಿ ಹೇಳಿದ್ದಾರೆ. ಇವರ ಈ ತಪ್ಪು ಆಲೋಚನೆಯು ವಸಾಹತುಶಾಹಿ ಬೋಧನೆಯ ಪ್ರಭಾವದಿಂದ ರೂಪುಗೊಂಡದ್ದು' ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ನಡೆದ ರಾಷ್ಟ್ರೀಯ ಪುಸ್ತಕ ಹಬ್ಬದಲ್ಲಿ ಅವರು ಮಾತನಾಡಿದರು.

'ಪಾಶ್ಚಿಮಾತ್ಯ ದೇಶಗಳಲ್ಲಿನ 'ದೇಶ' ಎಂಬ ಪರಿಕಲ್ಪನೆಗೂ ಭಾರತದ 'ರಾಷ್ಟ್ರ' ಎಂಬ ಪರಿಕಲ್ಪನೆಗೂ ಮೂಲಭೂತವಾಗಿರುವ ವ್ಯತ್ಯಾಸವಿದೆ. ನಮಗೆ ಯಾರ ಜೊತೆಗೂ ಜಗಳವಿಲ್ಲ. ವಿವಾದಗಳು ನಮ್ಮ ದೇಶದ ಸ್ವಭಾವವೇ ಅಲ್ಲ. ಒಗ್ಗೂಡಿ ಇರುವುದು ಮತ್ತು ಭ್ರಾತೃತ್ವವು ನಮ್ಮ ಪರಂಪರೆ' ಎಂದರು.

'ಅಭಿಪ್ರಾಯವೊಂದು ರೂ‍ಪುಗೊಂಡರೆ, ಅದರಿಂದ ಹೊರತಾದ ಯಾವ ವಿಚಾರಗಳೂ ಒಪ್ಪಿಗೆಯಾಗುವುದಿಲ್ಲ. ವ್ಯತಿರಿಕ್ತ ವಿಚಾರಗಳಿಗೆ ಬಾಗಿಲು ಮುಚ್ಚಲಾಗುತ್ತದೆ. ಆಮೇಲೆ ಇಂಥ ವಿಚಾರಗಳಿಗೆ 'ಇಸಂ' ಎನ್ನಲಾಗುತ್ತದೆ. ನಾವು ರಾಷ್ಟ್ರೀಯತೆ ಎನ್ನುತ್ತೇವೆಯೇ ಹೊರತು ರಾಷ್ಟ್ರೀಯವಾದ ಎನ್ನುವುದಿಲ್ಲ' ಎಂದು ಹೇಳಿದರು.

'ದೇಶ, ಈ ದೇಶದ ಪ್ರದೇಶಗಳಲ್ಲಿ ಆಡಳಿತ ನಡೆಸುವುದು ಕೇಂದ್ರ ಸರ್ಕಾರ- ಇದು ಪಾಶ್ಚಿಮಾತ್ಯರು ದೇಶವನ್ನು ಅರ್ಥಮಾಡಿಕೊಂಡ ಬಗೆ. ಆದರೆ, ಭಾರತವು ಎಂದಿಗೂ 'ರಾಷ್ಟ್ರ'ವಾಗಿಯೇ ಇತ್ತು ಮತ್ತು ವಿವಿಧ ರಾಜಮನೆತನಗಳ ಆಳ್ವಿಕೆಯಲ್ಲಿಯೂ ವಿದೇಶಿಗರ ಆಡಳಿತದ ಕಾಲದಲ್ಲಿಯೂ ಭಾರತವು 'ರಾಷ್ಟ್ರ'ವಾಗಿತ್ತು' ಎಂದು ವಿವರಿಸಿದರು.

-ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಧರ್ಮ ಜಾತಿ ಆಹಾರ ಪದ್ಧತಿ ಭಾಷೆ ಸಂಪ್ರದಾಯ ಮತ್ತು ರಾಜ್ಯಗಳು ಎಲ್ಲವೂ ಮಾನವ ಸೃಷ್ಟಿ. ವೈವಿಧ್ಯದಲ್ಲಿಯೂ ನಾವು ಒಗ್ಗಟ್ಟಾಗಿದ್ದೇವೆ. ಇದು ನಮ್ಮ ರಾಷ್ಟ್ರದ ಸಂಸ್ಕೃತಿ

-ಮೋಹನ್‌ ಭಾಗವತ್‌ ಆರ್‌ಎಸ್‌ಎಸ್‌ ಸರಸಂಘಚಾಲಕ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries