ಮಂಜೇಶ್ವರ: ಉದ್ಯಾವರ ತೋಟ ಜಿ.ಎಮ್.ಎಲ್.ಪಿ ಶಾಲೆಯಲ್ಲಿ ಆಸ್ಟರ್ ವಿಮ್ಸ್ ಆಸ್ಪತ್ರೆ ಕಾಸರಗೋಡು ಇದರ ಪ್ರಾಯೋಜಕತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆಯಿತು. ಶಾಲೆಯಲ್ಲಿ ಕಲಿಯುವ ಒಂದನೇ ತರಗತಿಯಿಂದ ನಾಲ್ಕನೆ ತರಗತಿವರೆಗಿನ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆಯನ್ನು ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಉದ್ಘಾಟಿಸಿದರು. ಆಸ್ಟರ್ ನಿಮ್ಸ್ ಆಸ್ಪತ್ರೆಯ ನೇತ್ರ ವೈದ್ಯ ಲುಬ, ಸಂಯೋಜಕರಾದ ಗೋಪಿಕ ಹಾಗೂ ಜಸೀಲ್ ತಪಾಸಣೆ ನಡೆಸಿ ಮಕ್ಕಳಿಗೆ ಸಲಹೆ ಸೂಚನೆ ನೀಡಿದರು. ಶಾಲಾ ಅಧ್ಯಾಪಕ ಅಭಿಲಾಷ್ ರಾವ್, ಮುಫೀದ, ರೇಖಾ, ಮುಮ್ತಾಜ್ ಸಹಕರಿಸಿದರು. ಅಭಿಲಾಷ್ ರಾವ್ ಸ್ವಾಗತಿಸಿ, ಮುಫೀದ ವಂದಿಸಿದರು.




.jpg)
.jpg)
