HEALTH TIPS

ದೇವಸ್ಥಾನಗಳು ಸಮಾಜವನ್ನು ಒಂದುಗೂಡಿಸುವ ಶಕ್ತಿಗಳು - ಎಡನೀರು ಶ್ರೀ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ, ಲಾಂಛನ ಬಿಡುಗಡೆ

ಬದಿಯಡ್ಕ: ಸೀಮೆಯ ಪ್ರಸಿದ್ಧ ದೇವಸ್ಥಾನಗಳ ಸಾಲಿಗೆ ಸೇರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನವು ತನ್ನ ಕಾರಣಿಕತೆಯಿಂದ ಸಮಾಜವನ್ನು ಒಂದುಗೂಡಿಸುವ ತಾಣವಾಗಿದೆ. ಸುಂದರವಾಗಿ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನವು ಬ್ರಹಕಲಶೋತ್ಸವಕ್ಕೆ ಅಣಿಯಾಗುತ್ತಿದೆ. ದೇವಸ್ಥಾನಗಳಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಿರಾತಂಕವಾಗಿ ನಡೆದಾಗ ಅಲ್ಲಿನ ಸಾನ್ನಿಧ್ಯ  ವೃದ್ಧಿಯಾಗುತ್ತದೆ. ಇದಕ್ಕೆ ಭಕ್ತರ ಒಗ್ಗೂಡುವಿಕೆಯ ಪ್ರಾರ್ಥನೆ ಅಗತ್ಯ ಎಂದು ಶ್ರೀ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು. 


ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು 2026 ಏಪ್ರಿಲ್ 17ರಿಂದ ಏಪ್ರಿಲ್ 28ರ ವರೆಗೆ ಜರಗಲಿದ್ದು, ಪೂರ್ವಭಾವಿಯಾಗಿ ಭಾನುವಾರ ಜರಗಿದ ಆಮಂತ್ರಣ ಪತ್ರಿಕೆ ಹಾಗೂ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನವನ್ನು ನೀಡಿದರು. 

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಂತನ ಸೇವೆಯನ್ನು ಮಾಡಲು ಬಂದೊದಗಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕುಂಬಳೆ ಸೀಮೆಯಲ್ಲಿ ಜನಿಸಿದ ನಮ್ಮ ಪಾಲಿಗೆ ಬಲುದೊಡ್ಡ ಪುಣ್ಯಕಾರ್ಯವಿದಾಗಿದೆ. ಅನೇಕ ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಕಂಗೊಳಿಸುತ್ತಿದೆ ಎಂದರು. 

ರಕ್ಷಾಕಾರಿ ಬ್ರಹ್ಮಶ್ರೀ ಯೋಗೀಶ ಕಡಮಣ್ಣಾಯ ಆರಿಕ್ಕಾಡಿ ಮಾತನಾಡಿ, ದೇವರು ನೀಡಿದ ಸಂಪತ್ತನ್ನು ಆತನ ಕಾರ್ಯಗಳಿಗೆ ವಿನಿಯೋಗಿಸಬೇಕು. ಸಂಸಾರವೆಂಬ ಸಾಗರದಲ್ಲಿ ದಾನಧರ್ಮಗಳನ್ನು ಮಾಡಿದಾಗ ಮನಸ್ಸಿಗೆ ನೆಮ್ಮದಿಯು ಲಭಿಸಲು ಸಾಧ್ಯವಿದೆ ಎಂದರು. ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆನುವಂಶಿಕ ಮೊಕ್ತೇಸರ ವಾಸುದೇವ ಭಟ್ ಅಗಲ್ಪಾಡಿ ಉಪಸ್ಥಿತರಿದ್ದು ಮಾತನಾಡಿದರು. ನಾಡಿನ ಪ್ರಮುಖರಾದ ಸೇವಾಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲಗುತ್ತು, ಪ್ರಮುಖರಾದ ಶಂಕರನಾರಾಯಣ ಮಯ್ಯ ಬದಿಯಡ್ಕ, ಶ್ಯಾಮ್‍ಪ್ರಸಾದ್ ಕಬೆಕ್ಕೋಡು, ಸದಾಶಿವ ಬಂಗೇರ ಮುರಿಯಂಕೂಡ್ಲು, ಡಾ. ಶ್ರೀನಿಧಿ ಸರಳಾಯ, ಕೊಡ್ಯಮೆ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಆಡಳಿತ ಮಂಡಳಿ ಸದಸ್ಯರುಗಳಾದ ಸೀತಾರಾಮ ನವಕಾನ, ಕೃಷ್ಣ ಬದಿಯಡ್ಕ, ಡಾ.ವೇಣುಗೋಪಾಲ ಕಳೆಯತ್ತೋಡಿ, ಅಶೋಕ್ ರೈ ಕೊರೆಕ್ಕಾನ, ಜಯಪ್ರಕಾಶ್ ಶೆಟ್ಟಿ ಕಡಾರುಬೀಡು, ಗೋಪಾಲ ಭಟ್ ಪಟ್ಟಾಜೆ, ಪ್ರೊ.ಎ.ಶ್ರೀನಾಥ್. ಈಶ್ವರ ಭಟ್ ಪೆರ್ಮುಖ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ,  ಜೊತೆ ಕಾರ್ಯದರ್ಶಿ ಉದಯಶಂಕರ ಪಿ.ಎಸ್. ವಂದಿಸಿದರು. ಜೊತೆ ಕಾರ್ಯದರ್ಶಿ ಡಾ.ಶ್ರೀಶಕುಮಾರ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಉದನೇಶ್ವರ ಕುಣಿತ ಭಜನಾ ತಂಡದ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಭಾಸ್ಕರ ಪಂಜಿತ್ತಡ್ಕ, ಗಣೇಶಪ್ರಸಾದ ಕಡಪ್ಪು, ಸತೀಶ ಪುದ್ಯೋಡು, ರಾಜೇಶ್ ಮಾಸ್ತರ್ ಅಗಲ್ಪಾಡಿ, ಶಿವಶಕ್ತಿ ಪೆರಡಾಲದ ಸದಸ್ಯರು ಸಹಕರಿಸಿದರು. ಯುವಕಲಾವಿದ ಧೀಕ್ಷಿತ್ ಬದಿಯಡ್ಕ ರಚಿಸಿದ ಬ್ರಹ್ಮಕಲಶೋತ್ಸವದ ಲಾಂಛನವನ್ನು ಈ ಸಂದರ್ಭದಲ್ಲಿ ಶ್ರೀಗಳು ಬಿಡುಗಡೆಗೊಳಿಸಿ ಕಲಾವಿದನನ್ನು ಆಶೀರ್ವದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries