'ಬೆಳಿಗ್ಗೆ 6.20ರ ಸುಮಾರಿಗೆ ಬೆಂಕಿ ಹತ್ತಿಕೊಂಡಿದೆ. 6.40ಕ್ಕೆ ಅಗ್ನಿ ಶಾಮಕ ಕಚೇರಿಗೆ ಈ ಬಗ್ಗೆ ಕರೆ ಬಂದಿದೆ. 7.45ರ ಹೊತ್ತಿಗೆ ಬೆಂಕಿ ನಂದಿಸಲಾಯಿತು' ಎಂದು ಅಧಿಕಾರಿಗಳು ಹೇಳಿದರು. ವಾಹನ ನಿಲುಗಡೆ ಗುತ್ತಿಗೆ ಪಡೆದಿದ್ದ ಕಂಪನಿಗೆ ಸೇರಿದ 2 ಮೊಬೈಲ್, ₹10 ಸಾವಿರ ನಗದು ಮತ್ತು ರಶೀದಿ ಮುದ್ರಿಸುವ ಯಂತ್ರವೂ ಸುಟ್ಟು ಹೋಗಿದೆ.
'ವಿದ್ಯುತ್ ತಂತಿಯಲ್ಲಿ ಹೊತ್ತಿಕೊಂಡಿದ್ದ ಕಿಡಿ ಎರಡು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದರಿಂದ ವಾಹನ ನಿಲುಗಡೆ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿತು ಎನ್ನಲಾಗುತ್ತಿದೆ. ಈ ಪ್ರದೇಶವನ್ನು ಟಿನ್ ಶೀಟ್ನಿಂದ ಮುಚ್ಚಲಾಗಿತ್ತು. ಬೆಂಕಿಯ ತಾಪಕ್ಕೆ ಇದು ಕೆಳಗೆ ಬಿದ್ದಿತು. ಇಲ್ಲಿಂದ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ಗಳಿಗೆ ಬೆಂಕಿ ತಗುಲದಂತೆ ಕ್ರಮ ವಹಿಸಲಾಯಿತು' ಎಂದರು.
'ವಾಹನ ನಿಲ್ದಾಣದ ಹತ್ತಿರವೇ ರೈಲು ಎಂಜಿನ್ ನಿಲ್ಲಿಸಲಾಗಿತ್ತು. ಇದಕ್ಕೆ ಏನಾದರೂ ಹಾನಿಯಾಗಿದೆಯೇ ಎಂಬುದರ ಕುರಿತು ರೈಲ್ವೆ ಇಲಾಖೆಯು ಯಾವುದೇ ಮಾಹಿತಿ ನೀಡಿಲ್ಲ. ಘಟನೆ ಕುರಿತು ರೈಲ್ವೆ ಇಲಾಖೆಯು ತನಿಖೆ ಆರಂಭಿಸಿದೆ' ಎಂದರು.

