ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಾಸರಗೋಡು ತಾಲೂಕು, ಬದಿಯಡ್ಕ ವಲಯದ ಕಾರ್ಯಕ್ಷೇತ್ರದಲ್ಲಿರುವ ವಿಘ್ನೇಶ್ವರ ತಂಡದ ಸದಸ್ಯ ಗಿರೀಶ್ ಪಾಶ್ರ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸಾವೆಚ್ಚ ಭರಿಸಲು ಕಷ್ಟಸಾಧ್ಯವಾದ್ದರಿಂದ ಕ್ಷೇತ್ರಕ್ಕೆ ಕ್ರಿಟಿಕಲ್ ಇಲ್ನೆಸ್ ಫಂಡ್ಗೆ ಮನವಿ ನೀಡಿದ್ದು, ಕ್ಷೇತ್ರದಿಂದ ಇಪ್ಪತ್ತು ಸಾವಿರ ಮೊತ್ತವನ್ನು ಮಂಜೂರು ಮಾಡಿರುತ್ತಾರೆ. ಇದರ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ದಿನೇಶ್ ಅವರು ಗಿರೀಶ್ರಿಗೆ ಹಸ್ತಾಂತರಿಸಿದರು. ಆ ಸಂದರ್ಭದಲ್ಲಿ ಬದಿಯಡ್ಕ ಜನಜಾಗೃತಿ ಸದಸ್ಯ ಸುಧಾಕರ್, ವಲಯದ ಮೇಲ್ವಿಚಾರಕಿ ಸುಗುಣ ಎನ್ ಹವಲ್ದಾರ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ, ಸೇವಾ ಪ್ರತಿನಿಧಿ ಪ್ರಫುಲ್ಲ ಉಪಸ್ಥಿತರಿದ್ದರು.

.jpg)
