HEALTH TIPS

ಬಡಗು ಶಬರಿಮಲೆ ಉಬ್ರಂಗಳ ಕ್ಷೇತ್ರದಲ್ಲಿ ಮೇ 11ಕ್ಕೆ ತಾಮ್ರ ಹೊದಿಕೆಯ 18 ಮೆಟ್ಟಲು ಸಮರ್ಪಣೋತ್ಸವ

ಬದಿಯಡ್ಕ : ಪಿಲಾಂಕಟ್ಟೆ ಸಮೀಪದ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರದಲ್ಲಿ   ಮೇ 11 ಸೋಮವಾರಬಡಗು ಶಬರಿ ಮಲೆ ಕ್ಷೇತ್ರದ ಪವಿತ್ರ 18 ಮೆಟ್ಟಿಲುಗಳಿಗೆ ತಾಮ್ರ ಹೊದಿಕೆ ಹಾಸಿದ  ಸಮರ್ಪಣೋತ್ಸವ ಜರಗಲಿದೆ. 


ಮೇ 11ಕ್ಕೆ ಸಂಜೆ 5ಕ್ಕೆ ಶ್ರೀ ಎಡನೀರು ಮಹಾಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ತಾಮ್ರ ಹೊದಿಕೆ ಹಾಸಿದ ಮೆಟ್ಟಿಲುಗಳ  ಸಮರ್ಪಣೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿ, 

ಶಬರಿಮಲೆಯ ಪಂದಳಂ ಅರಮನೆಯ ಶ್ರೀ ನಾರಾಯಣ ವರ್ಮ, ಕ್ಷೇತ್ರ ಜ್ಯೋತಿಷಿ ನಾಗೇಂದ್ರ ಭಾರದ್ವಾಜ್, ಕಂಚಿನ ತಟ್ಟೆ ಹೊದಿಕೆಯ ಪ್ರಧಾನ ದಾನಿ ತಾಳಿಪ್ಪಾಡಿ ಜಾಹ್ನವಿ ಶಾಸ್ತ್ರಿ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಇತರ ಗಣ್ಯರು ಭಾಗವಹಿಸುವರು. ಸಂಜೆ 6.30 ಕ್ಕೆ - 18 ಮೆಟ್ಟಿಲುಗಳ ದ್ವಾರ ಪೂಜೆ ನಡೆಯಲಿದೆ.

ರಾತ್ರಿ 8 ರಿಂದ ಕ್ಷೇತ್ರ ಉತ್ಸವ ಜರಗಲಿದ್ದು 101 ಚೆಂಡೆ ವಾದ್ಯಮೇಳ ಹಾಗೂ ಆನೆ ಅಂಬಾರಿಯೊಂದಿಗೆ ಕೇರಳ ಶೈಲಿಯ ಪೂರೋತ್ಸವವನ್ನು ಸ್ಮರಿಸುವ ರೀತಿಯ ಉತ್ಸವ ಈ ಬಾರಿ ವಿಶೇಷತೆಯಾಗಿದೆ ಎಂದು ಕ್ಷೇತ್ರ ಸಮಿತಿ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries