HEALTH TIPS

ವಾಚನಾ ಸಪ್ತಾಹ-ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ಯಾತ್ರೆ

ಕಾಸರಗೋಡು: ಓದುವ ಸಪ್ತಾಹ ಆಚರಣೆಯ ಅಂಗವಾಗಿ, ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ವತಿಯಿಂದ 'ಅಕ್ಷರ ಯಾತ್ರೆ' ಆಯೋಜಿಸಲಾಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪುಸ್ತಕ ಮತ್ತು ಓದುವಿಕೆಯ ಸಂದೇಶ ಘೋಷಣೆ ಮೊಳಗಿಸಿ ಮೆರವಣಿಗೆಯಲ್ಲಿಪಾಲ್ಗೊಳ್ಳುವ ಮೂಲಕ ವಾಚನಾ ಸಪ್ತಾಹದ ಸಂದೇಶ ಸಾರಿದರು. 


ಮಕ್ಕಳು ಓದುವಿಕೆಯ ಮಹತ್ವವನ್ನು ಎತ್ತಿ ತೋರಿಸುವ ಫಲಕಗಳು, ಪುಸ್ತಕಗಳು ಮತ್ತು ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.  'ಒಂದು ಪುಸ್ತಕ, ಒಂದು ಜಗತ್ತು' ಮತ್ತು 'ಒಟ್ಟಿಗೆ ಬೆಳೆಯೋಣ' ಮುಂತಾದ ಸಂದೇಶದೊಂದಿಗೆ ಮೆರವಣಿಗೆ ನಡೆಸಲಾಯಿತು.   

ಕೋಡೋಂ ಬೇಲೂರು ಗ್ರಾಮ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಭೂಪೇಶ್, ಪಿಟಿಎ ಉಪಾಧ್ಯಕ್ಷ ಸಿ. ಅನೂಪ್, ಎಸ್‍ಎಂಸಿ ಅಧ್ಯಕ್ಷ ಪಿ. ದಿವಾಕರನ್, ಮದರ್ ಪಿಟಿಎ ಉಪಾಧ್ಯಕ್ಷೆ ಸಂಧ್ಯಾ ದಿನೇಶನ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪಾಚೇನಿ ಕೃಷ್ಣನ್, ಮುಖ್ಯಶಿಕ್ಷಕಿ ಸಿ. ಕೋಮಲವಲ್ಲಿ, ಹಿರಿಯ ಸಹಾಯಕಿ ಪಿ.ಕೆ. ಬಾಲಚಂದ್ರನ್, ಸಿಬ್ಬಂದಿ ಕಾರ್ಯದರ್ಶಿ ಅನಿತಾ ಮೇಳತ್, ವಿದ್ಯಾರಂಗಂ ಸಂಯೋಜಕಿ ಅನೂಪ್ ಪೆರಿಯಾಲ್ ಮತ್ತು ಶಾಲಾ ನಾಯಕಿ ಪಿ. ಸೌಭಾಗ್ಯ  ನೇತೃತ್ವ ವಹಿಸಿದ್ದರು.   ಓದುವ ಸರಪಳಿ ಸವಾಲು, ರಸಪ್ರಶ್ನೆ,  ಸ್ನೇಹಿತರಿಗೆ ಪತ್ರ ಬರೆಯುವುದು, ಕಥೆ ಹೇಳುವುದು, ಭಾಷಣ, ಒಗಟು ನಾಟಕ, ಕೈಬರಹ, ತಾಯಿಯ ಓದುವಿಕೆ ಮತ್ತು ಚಿತ್ರಕಲೆಯನ್ನು ವಾಚನಾಸಪ್ತಾಹ  ಅಂಗವಾಗಿ ಆಯೋಜಿಸಲಾಗಿತ್ತು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries