HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಬಜಕ್ಕೂಡಲು ಅಮೃತಧಾರಾದಲ್ಲಿ ಆಂಜನೇಯ ಕಲ್ಪೋಕ್ತ ಪೂಜೆ ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮ ಮಂದಿರದಲ್ಲಿ ಶನಿವಾರ ಶನಿದೋಷ ನಿವಾರಣೆಗಾಗಿ ಶ್ರೀ ಆಂಜನೇಯ ಕಲ್ಪೋಕ್ತ ಪೂಜೆ ಹಾಗೂ ಆಂಜನೇಯ ಹೋಮ ನಡೆಯಿತು. ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಭಕ್ಕಿ ಭಾವದೊಂದಿಗೆ ಶನಿದೋಷ ನಿವಾರಣೆಗಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಗೋಪೂಜೆಯನ್ನು ನಡೆಸಿದರು. ಬೆಳಿಗ್ಗೆ ಮಹಾಗಣಪತಿ ಹೋಮ, ಕಾಮಧೇನು ಹವನ, ಗೋಪೂಜೆ ನಡೆಯಿತು. ಮಧ್ಯಾಹ್ನ ಪೂಣರ್ಾಹುತಿಯ ನಂತರ ವೈದಿಕ ಪ್ರಧಾನ ವೇದಮೂತರ್ಿ ಕೇಶವ ಪ್ರಸಾದ ಕೂಟೇಲು ಪ್ರಾರ್ಥನೆಯನ್ನು ನಡೆಸಿಕೊಟ್ಟು ಕಾತರ್ಿಕ ಮಾಸದ ಶನಿವಾರದ ದಿನ ಶನಿದೋಷ ನಿವಾರಣೆಗಾಗಿ ವಿಶೇಷವಾಗಿ ಈ ಸೇವೆಯನ್ನು ನಡೆಸಲಾಗಿದೆ. 33 ಕೋಟಿ ದೇವತೆಗಳ ಆವಾಸಸ್ಥಾನವಾದ ಗೋವುಗಳ ಸನ್ನಿಧಿಯಲ್ಲಿ ನಡೆಯುವ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸನ್ಮಂಗಳವಾಗಲಿ ಎಂದು ಪ್ರಾಥರ್ಿಸಿದರು. ಆಂಜನೇಯ ಕಲ್ಪೋಕ್ತ ಪೂಜೆಯನ್ನು ಗೋಳಿತ್ತಡ್ಕ ಮನೆಯವರು ಹಾಗೂ ಆಂಜನೇಯ ಹವನ ಸೇವೆ ಪರ್ತಜೆ ಶಿವಪ್ರಸಾದ ವಮರ್ುಡಿ ಮತ್ತು ಮನೆಯವರು ಕೈಗೊಂಡರು. ಮಾತೃವಿಭಾಗದವರಿಂದ ಹನುಮಾನ್ ಚಾಲೀಸ, ವಿಷ್ಣುಸಹಸ್ರನಾಮ ಪಾರಾಯಣ, ಭಜನಾ ರಾಮಾಯಣ, ಶ್ರೀ ದುಗರ್ಾಪರಮೇಶ್ವರಿ ಪೆರ್ಲ ಹಾಗೂ ಶ್ರೀ ದುಗರ್ಾಪರಮೇಶ್ವರಿ ಭಜನ ಸಂಘ ಶಿವಗಿರಿ ತಂಡದವರಿಂದ ಭಜನಾ ಸೇವೆಗಳು ನೆರವೇರಿತು. ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದಶರ್ಿ ಹರಿಪ್ರಸಾದ ಪೆರಿಯಪ್ಪು, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ಊರಿನ ವಿವಿಧ ಸಂಘಟನೆಯ ಪದಾಧಿಕಾರಿಗಳು, ವಿವಿಧ ವಲಯಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ನ.15ರ ತನಕ ಗೋಮಾತಾ ಸಪಯರ್ಾ ಹಾಗು ಗೋಪಾಷ್ಟಮೀ ಮಹೋತ್ಸವ ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪ್ರತೀದಿನ ಪ್ರಾತಃಕಾಲ ಗಣಪತಿ ಹವನ, ಕಾಮಧೇನು ಹವನ, ಸಾಯಂಕಾಲ ಭಜನಾ ರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಳಸೀಪೂಜೆ, ಗೋಪಾಲಕೃಷ್ಣ ಪೂಜೆ, ರಾತ್ರಿ 7 ಗಂಟೆಯಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ ವಿತರಣೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries