HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ನ.10 ರಂದು ಎಡನೀರು ಬನದಡಿಯಲ್ಲಿ ಯಕ್ಷನುಡಿಸರಣಿ 8 ಮತ್ತು ಕನ್ನಡ ಜಾಗೃತಿ ಉಪನ್ಯಾಸ ಬದಿಯಡ್ಕ: ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನದ ಎಂಟನೇ ಕಾರ್ಯಕ್ರಮವು ಎಡನೀರಿನ ಬನದಡಿಯ ಶಿವಪ್ಪ ನಾಯ್ಕ ಅವರ ನಿವಾಸದಲ್ಲಿ ನವೆಂಬರ್ 10 ರಂದು ಶನಿವಾರ ಅಪರಾಹ್ನ 1.30 ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯ ಪ್ರಶಸ್ತಿ ವಿಜೇತ ವಿಶ್ರಾಂತ ಅಧ್ಯಾಪಕ ಬಾಲಕೃಷ್ಣ ವೋಕರ್ೊಡ್ಲು ದೀಪಜ್ವಲನಗೊಳಿಸಿ ಉದ್ಘಾಟಿಸುವರು. ಸಿರಿಚಂದನ ಕನ್ನಡಯುವ ಬಳಗದ ಸದಸ್ಯೆ ಭವ್ಯಶ್ರೀ ಆರ್ ಬಲ್ಲಾಳ್ ಕನ್ನಡ ಜಾಗೃತಿ ಉಪನ್ಯಾಸ ನೀಡುವರು. ಬಳಗದ ಉಪಾಧ್ಯಕ್ಷೆ ಸ್ವಾತಿ ಕೆ.ವಿ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಪ್ರಶಾಂತ್ ಹೊಳ್ಳ ಎನ್ ಪ್ರಾಸ್ತಾವಿಕವಾಗಿ ಮಾತನಾಡುವರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನದ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ಅವರ ಮಾರ್ಗದರ್ಶನದಲ್ಲಿ ಸಿರಿ ಚಂದನ ಕನ್ನಡ ಯುವಬಳಗದ ಸದಸ್ಯರಿಂದ ' ಶ್ರೀದೇವೀ ಕೌಶಿಕೆ' ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸಂದೇಶ್ ಪಂಜಿತ್ತೊಟ್ಟಿ, ಚೆಂಡೆ ಮತ್ತು ಮದ್ದಳೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕೈ, ಗಣೇಶ್ ಪ್ರಸಾದ್ ಪಡೆಂಜಾರು ಸಹಕರಿಸುವರು. ಮುಮ್ಮೇಳದಲ್ಲಿ ದಿವಾಕರ ಬಲ್ಲಾಳ್ ಎ.ಬಿ, ಶಶಿಧರ ಕುದಿಂಗಿಲ, ನವೀನ ಕುಂಟಾರು, ಕಾತರ್ಿಕ್ ಪಡ್ರೆ, ಮನೋಜ್ ಎಡನೀರು, ಮಣಿಕಂಠ ಪಾಂಡಿಬಯಲು ಮತ್ತು ಪ್ರದೀಪ್ ಕುಮಾರ್ ಎಡನೀರು ಪಾತ್ರ ನಿರ್ವಹಿಸುವರು. ಶಿವಪ್ಪ ನಾಯ್ಕ್, ಬಳಗದ ಸದಸ್ಯರಾದ ಪ್ರದೀಪ್ ಕುಮಾರ್ ಎಡನೀರು, ಸಂಧ್ಯಾ, ಸೌಮ್ಯಾ ಕೆ. ಮುಂತಾದವರು ಉಪಸ್ಥಿತರಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries