ಕುಂಬಳೆ: ಸೂರಂಬೈಲು ಸಮೀಪದ ಎಡನಾಡು ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಸೋಮವಾರ ಶ್ರೀಧೂಮಾವತಿ ಉಳ್ಳಾಕ್ಳು ಹಾಗೂ ರಕ್ತೆಶ್ವರಿ ದೈವಗಳಿಗೆ ಪರಮೇಶ್ವರ ಭಟ್ ಇವರಿಂದ ತಂಬಿಲ ಕಾರ್ಯಕ್ರಮ ನಡೆಯಿತು.
ಸೇವಾ ಸಮಿತಿಯ ಅಧ್ಯಕ್ಷ ಯಚ್. ಶಂಕರನಾರಾಯಣ. ಭಟ್, ಕಾರ್ಯದರ್ಶಿ ಯಚ್. ಸೂರ್ಯನಾರಾಯಣ ಹಾಗೂ ಸಮಿತಿಯ ಸದಸ್ಯರಾದ ಉದನೇಶ್ವರ ಮುಖಾರಿ, ನಾರಾಯಣ ಪೂಜಾರಿ, ಗೋಪಾಲಕೃಷ್ಣ ಭಟ್ ಚೆನ್ನಂಪಾಡಿ, ಉದಯನಾರಾಯಣ ಹೊಸಮನೆ, ಯಶಸ್ ಹೊಸಮನೆ, ಸತ್ಯಶಂಕರ ಹೊಸಮನೆ, ಗಣೇಶಕಿರಣ ಹೊಸಮನೆ, ಕಿಶೋರಕೃಷ್ಣ ಹೊಸಮನೆ, ಅಶೋಕ ನೂಚನಗುಳಿ ಮುಂತಾದವರು ಉಪಸ್ಥಿತರಿದ್ದರು.ತಂಬಿಲ, ಶ್ರೀ ದೇವರಿಗೆ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


