ಒಟ್ಟಾವ: ಕೆನಡಾದ ವ್ಯಾಂಕೋವರ್ನ ಗುರುದ್ವಾರದಲ್ಲಿ ಕಿಡಿಗೇಡಿಗಳು ಖಾಲಿಸ್ತಾನ್ ಪರ ಬರಹಗಳನ್ನು ಬರೆಯುವ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಸಿಖ್ ಪ್ರತ್ಯೇಕತಾವಾದಿಗಳ ಸಣ್ಣ ಗುಂಪೊಂದು ಈ ಕೃತ್ಯ ಮಾಡಿದೆ ಎಂದು ಆರೋಪಿಸಲಾಗಿದೆ.
ಗುರುದ್ವಾರ ನಿರ್ವಹಿಸುತ್ತಿರುವ ಖಾಲ್ಸಾ ದಿವಾನ್ ಸೊಸೈಟಿ ಪ್ರಕಾರ, ಸಿಖ್ ಪ್ರತ್ಯೇಕತಾವಾದವನ್ನು ಪ್ರತಿಪಾದಿಸುವ ಕೆಲವರು ಈ ಕೃತ್ಯ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವ್ಯಾಂಕೋವರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




