ಪೆರ್ಲ: ಕಣ್ಣೂರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಸ್ನಾತ್ತಕೋತ್ತರ ಪದವಿ ಪರೀಕ್ಷೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಬಿ.ಕೆ. ಸ್ವಾತಿ ಒಂದನೇ ರಾಂಕ್ ಗಳಿಸಿದ್ದಾರೆ. ಇವರು ಪೆರ್ಲ ಸನಿಹದ ಕುರಡ್ಕ ನಿವಾಸಿ ಬಾಲಕೃಷ್ಣ ಪೂಜಾರಿ-ಸವಿತಾ ದಂಪತಿ ಪುತ್ರಿ. ಪದವಿ ಶಿಕ್ಷಣವನ್ನು ಪೆರ್ಲ ನಾಲಂದ ಕಾಲೇಜಿನಲ್ಲಿ ಏಳನೇ ರ್ಯಾಂಕಿನೊಂದಿಗೆ ಪೂರೈಸಿರುವ ಇವರು, ಪ್ರಸಕ್ತ ನಾಲಂದ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಸೇವೆ ಸಲ್ಲಿಸುತ್ತಿದ್ದಾರೆ.





