HEALTH TIPS

ಬಂಟ್ವಾಳದಲ್ಲಿ ಗುರುನರಸಿಂಹ ತಂಡದ ತಾಳಮದ್ದಳೆ

ಮಂಜೇಶ್ವರ: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದ ತಾಳಮದ್ದಳೆ ಮಾಸಾಚರಣೆಯಲ್ಲಿ ಮೀಯಪದವಿನ ಶ್ರೀ ಗುರುನರಸಿಂಹ ಯಕ್ಷ ಬಳಗ ತಂಡದಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ ಕವಿ ಡಾ.ಸಿಮಂತೂರು ನಾರಾಯಣ ಶೆಟ್ಟಿ ವಿರಚಿತ 'ಜಾಬಾಲಿ ನಂದಿನಿ' ಸೇವಾ ರೂಪದಲ್ಲಿ ಪ್ರಸ್ತುತಿಗೊಂಡಿತು.

ತಾಳಮದ್ದಳೆ  ಹಿಮ್ಮೇಳದಲ್ಲಿ  ಭಾಗವತ ರಾಮಪ್ರಸಾದ್ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಮುರಳೀಧರ ಆಚಾರ್ಯ, ಶ್ರೀವತ್ಸ ಸೋಮಯಾಜಿ ಭಾಗವಹಿಸಿದ್ದು, ಪಾತ್ರವರ್ಗದಲ್ಲಿ ಯೋಗೀಶ್ ರಾವ್ ಚಿಗುರುಪಾದೆ, ಗುರುರಾಜ ಹೊಳ್ಳ ಬಾಯಾರು, ಗುರುಪ್ರಸಾದ ಹೊಳ್ಳ ತಿಂಬರ, ಸಾಯಿಸುಮಾ ನಾವಡ ಕಾರಿಂಜ ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries