HEALTH TIPS

ಹಿಂದೂ ಧರ್ಮದ ಉನ್ನತಿಯಿಂದ ಜಗತ್ತಿನಲ್ಲಿ ನೆಮ್ಮದಿ ಸಾಧ್ಯ: ಭಾಗೀರಥಿ ಮುರುಳ್ಯ- ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನೂತನ ಮುಖಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಭಿಮತ

ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನೂತನ ಮುಖಮಂಟಪ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ವಿವಿಧ ವಿಧಿ ವಿಧಾನಗಳೊಂದಿಗೆ ಜರಗಿತು. 


ಈ ಪ್ರಯುಕ್ತ ಬೆಳಗ್ಗೆ ಸಂಗೀತಾರ್ಚನೆ, ದ್ವಾದಶ ನಾಳೀಕೇರ ಶ್ರೀ ಮಹಾಗಣಪತಿ ಹೋಮ, ಪೂರ್ಣಾಹುತಿ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅವರಿಂದ ದೀಪ ಪ್ರಜ್ವಲನೆ, ಪೂಜೆ, ಚಪ್ಪರ ಮದುವೆ, ತುಲಾಭಾರ ಸೇವೆ, ಮಹಿಳೆಯರಿಗೆ ತುಳಸಿಹಾರ ನೇಯುವ ಸ್ಪರ್ಧೆ, ವೇದಿತಾ ಪದ್ಮಾರು ಮತ್ತು ಪಾಂಚಜನ್ಯ ಬಾಲಗೋಕುಲದ ವತಿಯಿಂದ ಮೊಸರುಕುಡಿಕೆ ಶಾಸ್ತ್ರೀಯ ಪ್ರಸ್ತುತಿ, ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು.

ನಂತರ ಪಾಂಚಜನ್ಯ ಸಾಂಸ್ಕøತಿಕ ವೇದಿಕೆಯಲ್ಲಿ ಜರಗಿದ ಉದ್ಘಾಟನಾ ಸಮಾರಂಭದಲ್ಲಿ ಜಯದೇವ ಖಂಡಿಗೆ, ಉದಯ ಭಟ್ ಕೋಳಿಕ್ಕಜೆ,  ಸುವರ್ಣ ಮಾಸ್ತರ್ ಅಗಲ್ಪಾಡಿ, ಐತ್ತಪ್ಪ ಮವ್ವಾರು, ರವೀಂದ್ರನಾಥ ಭಂಡಾರಿ ನಾರಂಪಾಡಿ, ನಿರಂಜನ ಮಾಸ್ತರ್ ಪೆರಡಾಲ ಉಪಸ್ಥಿತರಿದ್ದರು. 


ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶ್ರೀ ಮಂದಿರಕ್ಕೆ ಮುದ್ದುಕೃಷ್ಣ ರಾಧೆಯರ ವೇಷದೊಂದಿಗೆ ಶೋಭಾಯಾತ್ರೆ ನಂತರ ಭಕ್ತಿಭಾವ ಗಾನಯಾನ, ಮಧ್ಯಾಹ್ನ ಗಾನ ಮಾಧುರ್ಯಂ, ಮಹಾಪೂಜೆ ನೆರವೇರಿತು.

ಪಾಂಚಜನ್ಯ ವೇದಿಕೆಯಲ್ಲಿ ಧಾರ್ಮಿಕ ಸಭೆ:

ಅಪರಾಹ್ನ ನಡೆದ ಧಾರ್ಮಿಕ ಸಭೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿ, ಹಿಂದೂ ಧರ್ಮದ ಅಭಿವೃದ್ಧಿಯಿಂದ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಸಾಧ್ಯ ಎಂದರು. ಮಂದಿರಗಳ ಅಭಿವೃದ್ಧಿಯಿಂದ ನಾಡಿನಲ್ಲಿ ಸಾಮರಸ್ಯದ ಬೆಳಕು ಮೂಡಲು ಸಾಧ್ಯವಿದೆ ಎಂದು ನುಡಿದರು.


ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿದ್ದು ಶುಭಹಾರೈಸಿದರು. ಸಂಕಪ್ಪ ಪೂಜಾರಿ ಉಡುಪಿ, ಡಾ.ಮನೋಹರ ಎಂ.ಜಿ. ಮುಳ್ಳೇರಿಯ, ಕೆ.ಪಿ.ಮೋಹನ್‍ದಾಸ್, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕೃಷ್ಣಮೂರ್ತಿ ಪುದುಕೋಳಿ, ಡಾ.ಕಿಶೋರ್ ಕುಣಿಕುಳ್ಳಾಯ, ಮಧುಸೂದನ ಆಯರ್ ಮಂಗಳೂರು, ರವಿಚಂದ್ರ ಮಂಗಳೂರು, ಹರೀಶ್ ಗೋಸಾಡ,  ವೆಂಕಟ್ರಮಣ ಮಾಸ್ತರ್ ಉಪ್ಪಂಗಳ, ಹರಿನಾರಾಯಣ ಮಾಸ್ತರ್ ಅಗಲ್ಪಾಡಿ, ಆನಂದ ಕೆ. ಮವ್ವಾರು, ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ಮುರಳಿ ಮಧೂರು, ಕರಿಯಪ್ಪ ಮಾರ್ಪನಡ್ಕ, ಬಾಬು ಮಾಸ್ತರ್ ಅಗಲ್ಪಾಡಿ, ಸುಧಾಮ ಪದ್ಮಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಲಾವಣ್ಯ ಗಿರೀಶ್ ಅಗಲ್ಪಾಡಿ ಪ್ರಾರ್ಥನೆ ಹಾಡಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಪ್ರೊ..ಎ.ಶ್ರೀನಾಥ್ ವಂದಿಸಿದರು. ರಮೇಶ್‍ಕೃಷ್ಣ ಪದ್ಮಾರು ಕಾರ್ಯಕ್ರಮ ನಿರೂಪಿಸಿದರು. 

ವಿವಿಧ ಕಾರ್ಯಕ್ರಮ:

ಸಂಜೆ ಗಾನ ಸಂಭ್ರಮ, ನೃತ್ಯ ಕೃಷ್ಣಂ, ರಾತ್ರಿ ಯೋಗಾಸನ, ನಾಟ್ಯರಂಜನಾ, ಯಕ್ಷಗಾನ ಬಯಲಾಟ, ಮಹಾಪೂಜೆ ಮುಂತಾದ ಕಾರ್ಯಕ್ರಮ ನೆರವೇರಿತು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries