ಕಾಸರಗೋಡು: ಪೊಯಿನಾಚಿ ವಣ್ಣಾರತ್ ಬಾರ ಶ್ರೀ ಭಗವತಿ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ಜರುಗಿತು. ತ್ರಿಶೂರ್ ಪಾಂಬುಮೆಕ್ಕಾಡ್ ಶಂಕರನಾರಾಯಣನ್ ನಂಬೂದಿರಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು.
ಬಾರ ಮಹಾವಿಷ್ಣು ದೇವಸ್ಥಾನ ಸಮಿತಿ ಅಧ್ಯಕ್ಷ ಮುಲ್ಲಚ್ಚೇರಿ ಬಾಲಕೃಷ್ಣನ್ ನಾಯರ್ ಆಮಂತ್ರಣ ಪತ್ರಿಕೆ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಕುಞÂಕೃಷ್ಣನ್ ನಾಯರ್ ತಿಟ್ಟಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಆಚರಣಾ ಸಮಿತಿ ಪ್ರಧಾನ ಸಂಚಾಲಕ ಎಂ.ಮೋಹನನ್ ನಾಯರ್ ಮಾಳಿಯಕ್ಕಲ್, ಕ್ಷೇತ್ರದ ಪ್ರತಿನಿಧಿ ಮನೋಜ್ ತಚ್ಚಂಗಾಡ್, ಸುಕುಮಾರನ್ ಎಡನೀರು, ರಾಜೀವನ್ ತೊಟ್ಟತ್ತಿಲ್ ಉಪಸ್ಥಿತರಿದ್ದರು. ಬಾರ ಶ್ರೀ ಭಗವತಿ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಮೇ 6 ರಿಂದ 8 ರವರೆಗೆ ಜರುಗಲಿರುವುದು.


