ಕಾಸರಗೋಡು: ಕೆಎಸ್ಆರ್ಟಿಸಿ ಕಾಸರಗೋಡು ಡಿಪೆÇೀದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಎ. ವಿಶ್ವನಾಥ್ ಮತ್ತು ನಾರಾಯಣ ನಾಯಕ್ ಸಿಎಚ್ ಅವರಿಗೆ ಕೆಎಸ್ಟಿ ವರ್ಕರ್ಸ್ ಯೂನಿಯನ್(ಐಎನ್ಟಿಯುಸಿ)ವತಿಯಿಂದ ಬೀಳ್ಕೊಡುಗೆ ಸಮಾರಂಭ ಕಾಸರಗೋಡಿನಲ್ಲಿ ನಡೆಯಿತು. ಇದೇ ಸಂದರ್ಭ ಯೂನಿಯನ್ ಸದಸ್ಯರ ಮಕ್ಕಳಲ್ಲಿ ಎಸ್ಸೆಸೆಲ್ಸಿ ಮತ್ತು ಪ್ಲಸ್ ಟು ಟಾಪರ್ಗಳಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಡಿಸಿಸಿ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ ಜೆ.ಎಸ್ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಘಟಕದ ಅಧ್ಯಕ್ಷ ವಿ. ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ಟಿ ವರ್ಕರ್ಸ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಬಿಜು ಜಾನ್, ಐಎನ್ಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎಂ.ವಿ.ಪದ್ಮನಾಭನ್, ಜಿಲ್ಲಾಧ್ಯಕ್ಷ ಜಲೀಲ್ ಮಲ್ಲಂ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಎನ್, ಕಾಞಂಗಾಡು ಘಟಕದ ಅಧ್ಯಕ್ಷ ಎಸ್.ಪವಿತ್ರನ್, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಪಿ.ಸುಧೀರ್, ಅಜಯನ್ ಕುರ್ಮಾ, ಪಿ.ಶ್ರೀನಿವಾಸ್, ಸಿ.ಮಧು, ಎಂ.ಸಜೀವನ್, ದೀಪಕ್ ದಾಮೋದರನ್, ಉಣ್ಣಿಕೃಷ್ಣನ್, ಎ.ಕೆ.ಅಜೀಜ್, ಕೆ.ವಿ.ನಾರಾಯಣನ್, ಎಂ.ಎಸ್.ಪ್ರಸಾದ್ ಉಪಸ್ಥಿತರಿದ್ದರು. ಕಾಸರಗೋಡು ಘಟಕದ ಕಾರ್ಯದರ್ಶಿ ಕೆ. ನರೇಂದ್ರನ್ ಸ್ವಾಗತಿಸಿದರು. ಸಿ. ಅನಿಲ್ ಕುಮಾರ್ ವಂದಿಸಿದರು.

