ಕಾಸರಗೋಡು: ಬಾಲಕಿಯನ್ನು ಹೋಂಸ್ಟೇಗೆ ಕರೆದೊಯ್ದು ಅತ್ಯಾಚಾರವೆಗಿರುವ ಪ್ರಕರಣಕ್ಕೆ ಸಂಬಂಧಿಸಿ ಅರ್ಜುನ್ ಎಂಬಾತನ ವಿರುದ್ಧ ಪೆÇೀಕ್ಸೋ ಕಾಯ್ದೆಯನ್ವಯ ಅಂಬಲತ್ತರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರಾಜಾಪುರಂ ಪೆÇಲೀಸ್ ಠಾಣೆ ವ್ಯಾಪ್ತಿಯ ಹೋಮ್ಸ್ಟೇಯಲ್ಲಿ ಪ್ರಕರಣ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜಾಪುರಂ ಠಾಣೆಗೆ ವರ್ಗಾಯಿಸಲಾಗಿದೆ. ಯುವಕರು ಈ ಹಿಂದೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು.
ಇವರಿಬ್ಬರೂ ಸ್ನೇಹಿತರಾಗಿದ್ದು, ಸ್ನೇಹ ದುರುಪಯೋಗಪಡಿಸಿಕೊಂಡ ಅರ್ಜುನ್ ಬಾಲಕಿಯನ್ನು ಹೋಂಸ್ಟೇಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎಣದು ದೂರಲಾಗಿದೆ. ಆರೋಪಿ ಪತ್ತೆಗಾಗಿ ಪೆÇಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.
ಟಿನ್ನೊಂದು ಪ್ರಕರಣದಲ್ಲಿ ರಾಜಪುರಂ ಠಾಣೆ ಪೆÇಲೀಸರು ಬಾಬು ಎಂಬ ವ್ಯಕ್ತಿಯ ವಿರುದ್ಧ ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹದಿನಾಲ್ಕರ ಹರೆಯದ ಬಾಲಕನಿಗೆ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಈ ಕೇಸು ದಾಖಲಿಸಲಾಗಿದೆ.


